ಬೆಳಗಾವಿಯಲ್ಲಿ ಗರ್ಭಿಣಿ ಮಹಿಳೆಯರ ಆರೈಕೆ: ವೇಣುಧ್ವನಿ ಜಾಗೃತಿ ಕಾರ್ಯಕ್ರಮ

ಬೆಳಗಾವಿಯಲ್ಲಿ ಗರ್ಭಿಣಿ ಮಹಿಳೆಯರ ಆರೈಕೆ: ವೇಣುಧ್ವನಿ ಜಾಗೃತಿ ಕಾರ್ಯಕ್ರಮ Care for pregnant women in Belagavi: Venudhvani awareness program

ಲೋಕದರ್ಶನ ವರದಿ

ಬೆಳಗಾವಿ: ವೇಣುಧ್ವನಿ ೯೦.೪ ಎಫ್.ಎಂ. ಕೇಂದ್ರ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಜುಲೈ ೧, ೨೦೨೬ರಂದು ಗರ್ಭಿಣಿ ಮಹಿಳೆಯರ ಆರೈಕೆ ಕುರಿತು ನೇರ ಫೋನ್-ಇನ್ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 

ಕಾರ್ಯಕ್ರಮದಲ್ಲಿ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹಿರಿಯ ಪ್ರಸೂತಿ ಮತ್ತು ಸ್ತಿöçÃರೋಗ ತಜ್ಞೆ ಹಾಗೂ ಪ್ರಾಧ್ಯಾಪಕರಾದ ಡಾ. ಎಂ. ಬಿ. ಬೆಳ್ಳದ್ ಅವರು ಭಾಗವಹಿಸಿ, ಗರ್ಭಾವಸ್ಥೆಯ ಅವಧಿಯಲ್ಲಿ ಸರಿಯಾದ ಆರೈಕೆ, ಪೌಷ್ಟಿಕ ಆಹಾರ, ನಿಯಮಿತ ತಪಾಸಣೆ ಹಾಗೂ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಮಾಹಿತಿ ನೀಡಿದರು. 

ಇದೇ ವೇಳೆ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಲಭ್ಯವಿರುವ ಆಧುನಿಕ ಆರೋಗ್ಯ ಸೇವೆಗಳ ಕುರಿತು ವಿವರಿಸಿ, ಶ್ರೋತೃಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು. 

ಕಾರ್ಯಕ್ರಮವನ್ನು ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕರಾದ ಮಣೀಷಾ ಪಿ. ಎಸ್. ಹಾಗೂ ಮಂಜುನಾಥ ಪೈ ನಿರೂಪಿಸಿದರು.