ಜುಲೈ 9ರ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲು ಕರೆ
Call to make the July 9 general strike a success
ವಿಜಯಪುರ 03: ಸಮ್ಮಿಶ್ರ ಸರ್ಕಾರ ರಚಿಸುವ ಮೂಲಕ ಮೂರನೇ ಅವಧಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ದುಡಿಯುವ ಜನತೆಯ ಮೇಲೆ ತನ್ನ ಕುತಂತ್ರಗಳ ಮೂಲಕ ಕ್ರೂರ ಕಾರ್ೊರೇಟ್ ಸೇವಕರಾಗಿಸುವ ನೀತಿಯನ್ನು ಹೇರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದರಿಂದ ಬಡತನ, ಹಸಿವು ಅಪೌಷ್ಟಿಕತೆಯೊಡನೆ ನಿರ್ಗತಿಕರಾಗಿಸುವುದರ ಜೊತೆಗೆ ನಿರುದ್ಯೋಗ ಮತ್ತು ಕೆಲಸವಿಲ್ಲದವರ ಸಂಖ್ಯೆ ಆಕಾಶ ಮುಟ್ಟಿದೆ. ಇದೇ ಕಾಲದಲ್ಲಿ ಕಾರ್ೊರೇಟ್ ಮತ್ತು ದೊಡ್ಡ ಉದ್ದಿಮೆಗಳ ಲಾಭವು ಅನೇಕ ಪಟ್ಟು ಹೆಚ್ಚಿ ಪರಾಕಷ್ಟೆಯನ್ನು ತಲುಪಿದೆ. ಸಂಘಟಿತ ವಲಯದ ಕಾರ್ಮಿಕರ ವೇತನವು 2023-24ರಲ್ಲಿ ಕುಸಿದು 2017-18ರ ಮಟ್ಟಕ್ಕಿಂತ ಕೆಳಗೆ ತಲುಪಿದೆ. ತದ್ವಿರುದ್ಧವಾಗಿ ಉದ್ಯೋಗ ಸೃಷ್ಟಿ ಕೇವಲ 1.5 ಶೇಕಡ ಹೆಚ್ಚಿದೆ. ಹಂಗಾಮಿ ದಿನಗೂಲಿ ನೌಕರರ ವೇತನ 203 ರಿಂದ 242 ರೂಪಾಯಿ ಗಳಿದ್ದರೆ, ಮಹಿಳಾ ದಿನಗೂಲಿ 128 ರೂ ಗಳಿಂದ 159ರೂ ಆಗಿದೆ. ಅದೇ ವರದಿಯು ಕಾರ್ೊರೇಟ್ ಸಂಸ್ಥೆಗಳ ಲಾಭ ಶೇಕಡಾ 22.3ರಷ್ಟು ಹೆಚ್ಚಿದೆ ಎಂಬುದನ್ನು ತೋರಿಸಿದೆ ಎಂದು ಜಂಟಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಹಾಗೂ ಸಿಐಟಿಯು ಜಿಲ್ಲಾಧ್ಯಕ್ಷರಾದ ಅಣ್ಣರಾಯ ಈಳಗೇರ ಹಾಗೂ ಎಐಯುಟಿಯುಸಿ ಸಂಚಾಲಕರಾದ ಮಲ್ಲಿಕಾರ್ಜುನ ಎಚ್.ಟಿ ಜಂಟಿಯಾಗಿ ಹೇಳಿದರು.
ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಂಹಿತ ಮತ್ತು ಅದರೊಂದಿಗೆ ಬಂದಿರುವ ಇಡೀ ಆಡಳಿತ ವ್ಯವಸ್ಥೆಯ ಪುನರರಚನೆಯು ಇಂತಹ ಭೀಕರ ಜನವಿರೋಧಿ ಮತ್ತು ರಾಷ್ಟ್ರವಿರೋಧಿ ಆಡಳಿತವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಆದ್ದರಿಂದ ದುಡಿಯುವ ಜನರ ಒಗ್ಗಟ್ಟಿನಿಂದ ಕಾರ್ಮಿಕ ಸಂಹಿತೆಯನ್ನು ಸೋಲಿಸಿ ರದ್ದುಗೊಳಿಸುವುದು ಇಂದಿನ ಪ್ರಮುಖ ಕಾರ್ಯವಾಗಿದೆ.
ಬಿಸಿಲಿನ ಅಲೆ, ಪ್ರವಾಹ, ಚಂಡಮಾರುತಗಳು, ಅಕಾಲಿಕ ಮಳೆ ಮತ್ತು ಇತರ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಅಪಾಯಗಳು ಮತ್ತು ಹಾನಿಗಳನ್ನು ಸರಿದೂಗಿಸಲು ಹವಾಮಾನ ಸ್ಥಿತಿಸ್ಥಾಪಕತ್ವನಿಧಿಯನ್ನು ಸ್ಥಾಪಿಸಬೇಕು. ವಲಸೆ ಕಾರ್ಮಿಕರ ಕುರಿತಾದ ರಾಷ್ಟ್ರೀಯ ನೀತಿಯು ತುರ್ತಾಗಿ ಅಗತ್ಯವಿದೆ ಮತ್ತು ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ಅನ್ನು ಪುನರಜೀವನಗೊಳಿಸಬೇಕು ಮತ್ತು ಮರುಪರೀಶೀಲಿಸಿ, ಬಲಪಡಿಸಬೇಕು ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು. ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ, ಆಶಾ ಕಿರಣ ಇತ್ಯಾದಿ ಸ್ಕೀಮ್ ಕಾರ್ಯಕರ್ತೆಯರಿಗೆ ಕಾರ್ಮಿಕರ ಸ್ಥಾನಮಾನ ನೀಡುವ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸನ್ನು ಜಾರಿಗೆ ತರಬೇಕು ಮತ್ತು ನ್ಯಾಯಾಂಗ ನಿರ್ದೇಶನಗಳ ಪ್ರಕಾರ ಅವರಿಗೆ ಗ್ರಾಚ್ಯುಟಿಯನ್ನು ತಕ್ಷಣವೇ ಖಚಿತಪಡಿಸಬೇಕು. ನರೇಗಾ ಅಡಿಯಲ್ಲಿ ಹೆಚ್ಚಿದ ಕನಿಷ್ಠ ವೇತನದೊಂದಿಗೆ ವಾರ್ಷಿಕ 200 ದಿನಗಳ ಕೆಲಸವನ್ನು ಖಚಿತಪಡಿಸಬೇಕು.
ಈ ಸಂದರ್ಭದಲ್ಲಿ ಎಐಟಿಯುಸಿ ಹಾಗೂ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಸಂಘಟನಾಕಾರರಾದ ಚಂದ್ರಶೇಖರ ಘಂಟೆಪ್ಪಗೋಳ ಮಾತನಾಡಿ, ಅತ್ಯುನ್ನತ ತ್ರಿಪಕ್ಷೀಯ ಸಂಸ್ಥೆಯಾದ ಭಾರತೀಯ ಕಾರ್ಮಿಕ ಸಮ್ಮೇಳನ (ಐಅ)ವನ್ನು ತಕ್ಷಣವೇ ಕರೆಯಬೇಕು. ಕೆಲಸದ ಸ್ಥಳದಲ್ಲಿ ಹಕ್ಕುಗಳ ಮೂಲಭೂತ ತತ್ವಗಳನ್ನು (ಈಕಖಘ) ಕೆಲಸದ ಸ್ಥಳ ಸುರಕ್ಷತೆಗೆ ಸಂಬಂಧಿಸಿದಂತೆ ಪಾಲಿಸಬೇಕು. ಗೃಹಾಧಾರಿತ ಕಾರ್ಮಿಕರ ಮೇಲಿನ ನಿರ್ಣಯಗಳನ್ನು ತಕ್ಷಣವೇ ಅನುಮೋದಿಸಬೇಕು. ಸಾರ್ವಜನಿಕ ಸೇವಾ ವಲಯಗಳ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ನಿಯಮಿತ ಪರಿಷ್ಕರಣೆಯೊಂದಿಗೆ ಬೆಲೆ ಸೂಚ್ಯಂಕದೊಂದಿಗೆ ಕನಿಷ್ಠ ವೇತನವಾಗಿ ರೂ. 26000/-ಖಚಿತಪಡಿಸಬೇಕು. 8 ನೇ ವೇತನ ಆಯೋಗವನ್ನು ಆದಷ್ಟು ಬೇಗ ರಚಿಸಬೇಕು. ಸ್ಥಿರಾವಧಿಯ ಉದ್ಯೋಗ ಮತ್ತು ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಸಂಚಾಲಕರಾದ ಸುರೇಶ ಜೀಬಿ ಮಾತನಾಡಿ, ಹೊರಗುತ್ತಿಗೆ/ ಗುತ್ತಿಗೆ ಪದ್ಧತಿಯನ್ನು ನಿಲ್ಲಿಸಬೇಕು. ಕಾರ್ಮಿಕ ವರ್ಗ ಕಷ್ಟಪಟ್ಟು ಗಳಿಸಿದ 8 ಗಂಟೆ ಕೆಲಸದ ಹಕ್ಕಿನ ಉಲ್ಲಂಘನೆಯನ್ನು ತಡೆಯಬೇಕು. ಹೊಸ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಸಾಕಷ್ಟು ನಿಧಿಯನ್ನು ಒದಗಿಸಬೇಕು. ವಂತಿಗೆರಹಿತ ಹಳೆಯ ಪಿಂಚಣಿ ಯೋಜನೆಯನ್ನು ಪುನಃಸ್ಥಾಪಿಸಬೇಕು. ಬೆಲೆ ಸೂಚ್ಯಂಕಕ್ಕೆ ತಳಕು ಹೊಂದಿರುವ ಇಪಿಎಸ್ 95 ಅಡಿಯಲ್ಲಿ ಕನಿಷ್ಠ ರೂ. 5000/- ಮಾಸಿಕ ಪಿಂಚಣಿಯನ್ನು ಖಚಿತಪಡಿಸಬೇಕು. ಯಾವುದೇ ಯೋಜನೆಯಡಿಯಲ್ಲಿ ಒಳಪಡದವರಿಗೆ ರಾಜ್ಯಗಳು ಮತ್ತು ಕೇಂದ್ರದ ಬಜೆಟ್ ಹಂಚಿಕೆಯ ಮೂಲಕ ವಿಶೇಷ ನಿಧಿ/ಕಾರ್ಪನ ಅನ್ನು ರಚಿಸುವ ಮೂಲಕ ತಿಂಗಳಿಗೆ ರೂ. 6000/- ಪಿಂಚಣಿ ನೀಡಬೇಕು. ಈಗಾಗಲೇ ದಾಖಲಾಗಿರುವ 57.5 ಮಿಲಿಯನ್ಗಿಂತಲೂ ಹೆಚ್ಚು ನಿರ್ಮಾಣ ಮತ್ತು ಇತರ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಗಣನೀಯವಾಗಿ ಸುಧಾರಿಸಬೇಕು. ಇ-ಶ್ರಮ್ ಪೋರ್ಟಲ್ನಲ್ಲಿ ದಾಖಲಾದ 30 ಕೋಟಿ ಅಸಂಘಟಿತ ಕಾರ್ಮಿಕರನ್ನು ಆಗತ್ಯ ಬಜೆಟ್ ನಿಧಿಯ ಮೂಲಕ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಒಳಗೊಳ್ಳಬೇಕು. ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರನ್ನು ಕೆಲಸಗಾರರೆಂದು ಗುರುತಿಸಬೇಕು. ಮತ್ತು ಎಲ್ಲಾ ಕಾರ್ಮಿಕ ಕಾನೂನುಗಳು ಅವರಿಗೆ ಅನ್ವಯವಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಹಂದ್ರಾಳ, ಮಹಾದೇವಿ ಧರ್ಮಶೆಟ್ಟಿ, ಸುರೇಖಾ ರಜಪೂತ, ಭರತಕುಮಾರ ಎಚ್.ಟಿ., ಪ್ರಾಂತ ರೈತ ಸಂಘದ ಮುಖಂಡರಾದ ಭೀಮರಾಯ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 