ಕ್ಯಾಲೆಂಡರ ಬಿಡುಗಡೆ ಕಾರ್ಯಕ್ರಮ
Calendar release event
ಮುದ್ದೇಬಿಹಾಳ 10: ಪಟ್ಟಣದಲ್ಲಿ ಪ್ರತಿಷ್ಠತ ಎಸ್.ಎಸ್ ವ್ಹಿ ವ್ಹಿ ಸಂಘದ ಆಶ್ರಯದಲ್ಲಿ ರವಿ ನಾಯಕ ಸಂಸ್ಥಾಪಕರು ಕಾರ್ಯದರ್ಶಿಗಳ ಅವರ ಎಲ್ಕೆಜಿ ಯಿಂದ ಪದವಿ ಮತ್ತು ಪಿಎಚ್ಡಿ, ಪಿಜಿ ಹಾಗೂ ತಾಂತ್ರಿಕ ಸಮೂಹ ಶಿಕ್ಷಣ ಸಂಸ್ಥೆಗಳ ಸನ್ 2026ನೇ ಸಾಲಿನ ಹೊಸ ಕ್ಯಾಲೆಂಡರ ಬಿಡುಗಡೆ ಕಾರ್ಯಕ್ರಮ ದಿ. 10 ಶನಿವಾರ ದಂದು ಅದ್ಯೂರಿಯಾಗಿ ನಡೆಯಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮುದ್ದೇಬಿಹಾಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭಾವಂತ ಬಡಮಕ್ಕಳು ವಿವಿಧ ದೂರದ ಊರುಗಳಿಂದ ಹೋಗಿ ಶಿಕ್ಷಣ ಕಲಿಯುವದು ಕಷ್ಟದ ಕೆಲಸ. ಅವರು ಶಿಕ್ಷಣದಿಂದ ವಂಚಿತರಾಗಬಾರದೆಂದು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್ಎಸ್ವ್ಹಿವ್ಹಿ ಸಂಘದ ಅಡಿಯಲ್ಲಿ ಎಲ್ಕೆಜಿಯಿಂದ ಪದವಿ ಪಿಜಿ ಪಿಎಚ್ಡಿ ತಾಂತ್ರಿಕ ಎಲ್ಲಾ ವಿಭಾಗಗಳನ್ನು ಪ್ರಾರಂಭಿಸಿದ ತಾಲೂಕಿನ ಏಕೈಕ ಶಿಕ್ಷಣ ಸಂಸ್ಥೆ ನಮ್ಮ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ರವಿ ನಾಯಕ ಹೇಳಿದರು.
ನಮ್ಮ ಸಂಸ್ಥೆಯ ಎಲ್ಲಾ ವಿಭಾಗಗಳು ಸರಕಾರದ ಆದೇಶಕ್ಕನುಗುಣವಾಗಿ ಶಿಕ್ಷಣವನ್ನು ನೀಡುತ್ತಾ ಎಲ್ಲಾ ವಿಭಾಗದಲ್ಲಿ ಅನುಭವಿಕ ನುರಿತ ಉಪನ್ಯಾಸಕರು ಸಿಬಂದಿಗಳನ್ನು ಹೊಂದಿದೆ ಹಾಗೂ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ಮೂಲಭೂತ ಸೌಲಭ್ಯಗಳನ್ನು ಮತ್ತು ಲ್ಯಾಬ್ ಶಾಲಾವಾಹನ ವಿಶಾಲವಾದ ಆಟದ ಮೈದಾನವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳಿಗೆ ಮೆಚ್ಚುಗೆಯಾಗಿ ಅತಿವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಯಾಗದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಆರ್.ಎನ್. ನಾಯಕ ಸಂಸ್ಥಾಪಕರು, ಡಾ. ಅಶೋಕ ಆರ್ ರಾಠೋಡ, ಬಿ.ಜಿ. ಬಿರಾದಾರ, ಆರ್ ವ್ಹಿ ಕುಲಕರ್ಣಿ, ಬಿ.ಎಚ್.ಹುಡೇದ, ಆಯ್.ಎ. ಬಿರಾದಾರ, ಎಮ್. ಎಮ್. ಬಾವೂರ, ಪಿ. ಎಲ್. ರಾಠೋಡ, ದೀಪಾ ಕುಲಕರ್ಣಿ, ಆರ್.ಎಸ್ ರಾಠೋಡ, ಕೆ.ಪಿ.ರಾಠೋಡ, ಆರ್. ಎಮ್ ವಾಲಿಕಾರ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 