ಕಲಕೇರಿಯಿಂದ ಸಾತಾರ ಬಸ್ ಸೇವೆ ಆರಂಭ
Bus service from Kalakeri to Satara launched
ತಾಳಿಕೋಟಿ 06 : ತಾಲೂಕಿನ ಕಲಕೇರಿ ಗ್ರಾಮದಿಂದ ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರದ ಕರಾಡ್ ಜತ್ ಹಾಗೂ ಸಾತಾರ್ಗೆ ಹೋಗುವ ನೂತನ ರಸ್ತೆ ಸಾರಿಗೆ ಬಸ್ ನ ಸೇವೆ ಆರಂಭವಾಗಿದೆ. ಈ ನೂತನ ಬಸ್ ಸೇವೆ ಜುಲೈ 5 ಸೋಮವಾರದಿಂದ ಆರಂಭಗೊಂಡಿದ್ದು ಬಸ್ಸು ವಿಜಾಪುರದಿಂದ ಬೆಳಿಗ್ಗೆ 7:30ಕ್ಕೆ ದೇವರ ಹಿಪ್ಪರಗಿ ಮಾರ್ಗವಾಗಿ ಬಿಬಿ ಇಂಗಳಗಿ ಗ್ರಾಮದ ಮೂಲಕ ಕಲಕೇರಿಗೆ ತಲುಪುವುದು.
ನಂತರ ಅಲ್ಲಿಂದ ಬೆಳಗ್ಗೆ 9-30ಕ್ಕೆ ವಿಜಯಪುರ ಮಾರ್ಗವಾಗಿ ಜತ್, ವೀಟಾ, ಕರಣ್, ಸಾತಾರಕ್ಕೆ ಹೋಗುವುದು. ನೂತನ ಬಸ್ಸಿನ ಸೇವೆ ಆರಂಭಿಸುವ ಮುನ್ನ ಕಲಿಕೇರಿ ಗ್ರಾಮಸ್ಥರು ಬಸ್ಸನ್ನು ಗ್ರಾಮದ ವೀರಗಂಟಿ ಮಡಿವಾಳೇಶ್ವರ ದೇವಸ್ಥಾನದ ಮುಂದೆ ನಿಲ್ಲಿಸಿ ವಿಶೇಷ ಪೂಜೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಬಸ್ಸಿನ ನೂತನ ಚಾಲಕ ನಿರ್ವಾಹಕ ಹಾಗೂ ಬಸ ನಿಲ್ದಾಣದ ನಿಯಂತ್ರಣಾಥಿಕಾರಿಗೆ ಸನ್ಮಾನಿಸಿ ಗೌರವಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 