ಕಾಂಗ್ರೆಸ್‌ನ ಹೆಚ್‌.ಜಿ.ರಾಮುಲು ಮನೆಗೆ ಬೋಸರಾಜ ಭೇಟಿ ಆರೋಗ್ಯ ವಿಚಾರಣೆ

ಕಾಂಗ್ರೆಸ್‌ನ ಹೆಚ್‌.ಜಿ.ರಾಮುಲು ಮನೆಗೆ ಬೋಸರಾಜ ಭೇಟಿ ಆರೋಗ್ಯ ವಿಚಾರಣೆ Bosaraja visits Congress' H.G. Ramulu's house to inquire about his health

 ಗಂಗಾವತಿ 04: ರಾಜಕೀಯ ಬೀಷ್ಮ, ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಹಿರಿಯ ಮುಖಂಡರಾದ ಹೆಚ್‌.ಜಿ.ರಾಮುಲು ನಿವಾಸಕ್ಕೆ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ ಅವರು ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿ ರಾಜಕೀಯ ವಿದ್ಯಮಾನ್ ಚರ್ಚಿಸಿದರು. ಕಲ್ಯಾಣ ಕರ್ನಾಟಕ ಭಾಗದ ಪಕ್ಷ ಸಂಘಟನೆ, ಅಭಿವೃದ್ಧಿ, ಮುಂದಿನ ರಾಜಕೀಯ ವಿದ್ಯಮಾನಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದು, ಅನೇಕ ವಿಷಯಗಳ ಕುರಿತು ರಾಮುಲು ಮಾರ್ಗದರ್ಶನ ಪಡೆದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷಕ್ಕೆ ಹೆಚ್‌ಜಿ ರಾಮುಲು ಕುಟುಂಬದ ಕೊಡುಗೆ ಮಹತ್ತರವಾಗಿದ್ದು, ಮೂಲೆಗುಂಪಾಗಿದ್ದ ಕಾಂಗ್ರೆಸ್ ಪಕ್ಷವನ್ನು ಅಂಧಿನ ದಿನಗಳಲ್ಲಿ ಆರ್ಥಿಕ ಶಕ್ತಿ ತುಂಬಿ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದ ಕೀರ್ತಿ ರಾಮುಲು ಅವರಿಗೆ ಸಲ್ಲುತ್ತಿದ್ದು, ಕಾಂಗ್ರೆಸ್ ಪಕ್ಷ ಅವರ ಕೊಡುಗೆಯನ್ನು ಮರೆತಿಲ್ಲ  ಮುಂದಿನ ದಿನಮಾನಗಳಲ್ಲಿ ಹೆಚ್‌.ಆರ್‌.ಶ್ರೀನಾಥ್‌ರವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅತ್ಯುತ್ತಮ ಸ್ಥಾನಮಾನ ಲಭಿಸಲಿದ್ದು, ಕೊಪ್ಪಳ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ವಿಜೃಂಭಸಲಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್‌.ಆರ್‌. ಶ್ರೀನಾಥ್, ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.