ಹಾವೇರಿ೩೦: ನೆರೆ ಪರಿಹಾರಕ್ಕೆ ಸಂಬಂಧಿಸಿದ ಯಾವುದೇ ಪರಿಹಾರ ಕಾರ್ಯಗಳು ನಿಲ್ಲಬಾರದು, ವಿಳಂಬವಾಗಬಾರದು. ಸಕರ್ಾರ ಸಂತ್ರಸ್ತರ ಸಮಸ್ಯೆಗೆ ಕೂಡಲೇ ಸ್ಪಂದಿಸಿದೆ. ಅದೇ ವೇಗದಲ್ಲಿ ಜಿಲ್ಲಾಡಳಿತ ಕೆಲಸಮಾಡಬೇಕು, ಸಂತ್ರಸ್ತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಅತಿವೃಷ್ಠಿ ಹಾಗೂ ನೆರೆ ಪರಿಹಾರ ಕಾರ್ಯಗಳ ಕುರಿತಂತೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ನೆರೆ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳು ಅತ್ಯುತ್ತಮವಾಗಿ ನಿರ್ವಹಣೆಮಾಡಿದ್ದಾರೆ. ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸುವೆ. ಪರಿಹಾರ ಕಾರ್ಯವೂ ಅಷ್ಟೇ ವೇಗವಾಗಿ ತ್ವರಿತವಾಗಿ ನಡೆಯಬೇಕು. ಪುನರ್ವಸತಿ ಕೆಲಸ ನಿರಂತರವಾಗಿ ನಡೆಯಬೇಕು. ಉನ್ನತ ಮಟ್ಟದಲ್ಲಿ ನಡೆಯಬೇಕು. ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಪದೆ ಪದೇ ನೆರೆ ಹಾವಳಿ ಸಮಸ್ಯೆಯನ್ನು ಎದುರಿಸುತ್ತಿರುವ ಜಿಲ್ಲೆಯ ಗ್ರಾಮಗಳ ಶಾಶ್ವತ ಸ್ಥಳಾಂತರ ಅಗತ್ಯವಾಗಿದೆ. ಯಾವ ಗ್ರಾಮಗಳು ಪೂರ್ಣ ಪ್ರಮಾಣದಲ್ಲಿ ಹಾಗೂ ಯಾವ ಗ್ರಾಮಗಳನ್ನು ಭಾಗಶಃ ಸ್ಥಳಾಂತರಿಸಬೇಕು, ಯಾವ ಗ್ರಾಮಗಳಿಗೆ ತಡೆ ಗೋಡೆ ನಿಮರ್ಿಸಬೇಕು ಎಂಬ ಮಾಹಿತಿ ಹಾಗೂ ಅಗತ್ಯವಾದ ಅನುದಾನ ಕುರಿತಂತೆ ವಿವರ ಸಲ್ಲಿಕೆಗೆ ಸೂಚಿಸಿದರು.
ಫಲಾನುಭವಿಗಳಿಗೆ ತುತರ್ು ಪರಿಹಾರವಾಗಿ ಹತ್ತು ಸಾವಿರ ರೂ. ನೀಡಲು 11.30 ಕೋಟಿ ರೂ. ಬೇಕಾಗಿದೆ ಎಂದು ಮಾಹಿತಿ ಸಲ್ಲಿಸಲಾಗಿದೆ. ಮರು ಸಮೀಕ್ಷೆಯ ಮೂಲಕ ಇನ್ನೂ ಕೆಲವು ಮನೆಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಜಿಲ್ಲಾಡಳಿತದಿಂದ 18 ಕೋಟಿ ರೂ.ಗಳ ಬೇಡಿಕೆ ಸಲ್ಲಿಸಲಾಗಿತ್ತು. ಸಕರ್ಾರದಿಂದ ತುತರ್ಾಗಿ 20 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ನಾಳೆ ಮಧ್ಯಾಹ್ನದೊಳಗೆ ಬಾಕಿ ಉಳಿದಿರುವ ಫಲಾನುಭವಿಗಳ ಪರಿಹಾರ ಹಣ ಖಾತೆಗೆ ಜಮೆಯಾಗಬೇಕು ಎಂದು ಸೂಚಿಸಿದರು.
ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಿ ಸಕರ್ಾರದ ಬಸವ, ಅಂಬೇಡ್ಕರ ವಿವಿಧ ವಸತಿ ಯೋಜನೆಗಳನ್ನು ಮಂಜೂರ ಮಾಡಿ ಕುಸಿದ ಮನೆಗಳ ಪುನರ್ ನಿಮರ್ಾಣಕ್ಕೆ ಆದ್ಯತೆ ನೀಡಬೇಕು. ಈ ಕುರಿತಂತೆ ಸಕರ್ಾರದ ಹಂತದಲ್ಲಿ ನಿಧರ್ಾರ ಮಾಡಲಾಗಿದೆ. ಶೀಘ್ರವೇ ಮಾರ್ಗಸೂಚಿ ಜಿಲ್ಲಾಡಳಿತಕ್ಕೆ ಬರಲಿದೆ ಎಂದು ಹೇಳಿದರು.
ನೆರೆಯಿಂದ ಹಾನಿಯಾಗಿರುವ ಮನೆಗಳಲ್ಲಿ ಬಾಡಿಗೆದಾರರು ವಾಸವಾಗಿದ್ದರೆ ಮಾಲೀಕರಿಗೂ ಮತ್ತು ಬಾಡಿಗೆದಾರರಿಗೂ ಪರಿಹಾರ ನೀಡಲು ಸಕರ್ಾರ ನಿರ್ಧರಿಸಿದೆ. ಈ ಕುರಿತಂತೆ ಮಾರ್ಗಸೂಚಿಯು ಸಕರ್ಾರದಿಂದ ಬರಲಿದೆ. ಈ ಕುರಿತಂತೆ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ನೆರೆ ಹಾವಳಿ ಹಾನಿ ಮಾಹಿತಿಯನ್ನು ಸ್ಥಳೀಯ ಶಾಸಕರೊಂದಿಗೆ ಸಭೆನಡೆಸಿ ಚಚರ್ಿಸಬೇಕು. ಒಂದೊಮ್ಮೆ ಯಾವುದಾದರೂ ಗ್ರಾಮಗಳು ಅಥವಾ ಮನೆಗಳು, ಬೆಳೆಗಳು ಕೈಬಿಟ್ಟು ಹೋಗಿವೆ ಎಂದು ಶಾಸಕರು ಸೂಚಿಸಿದರೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸುವಂತೆ ತಹಶೀಲ್ದಾರಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳು ಜಿಲ್ಲೆಯ ನೆರೆಪೀಡಿತ ಗ್ರಾಮಗಳಿಗೆ ಶನಿವಾರ ಭೇಟಿ ನೀಡಲಿದ್ದಾರೆ. ಕೂಡಲ, ಕುಣಿಮೆಳ್ಳಿಹಳ್ಳಿ, ಕರ್ಜಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅತಿವೃಷ್ಠಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ವಿವರ, ಸವರ್ೇ ಕಾರ್ಯ ಹಾಗೂ ಪರಿಹಾರ ವಿವರಗಳನ್ನು ಸಭೆಗೆ ವಿವರಿಸಿದರು.
ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ವಿ.ಎಸ್. ಸಂಕನೂರ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಹರ್ಷಲ್ ನಾರಾಯಣ ಬೋಯಾರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.