ಬಿ.ಕೆ.ಗುಪ್ತಾ ಪ್ರೌಢಶಾಲೆ ಮಕ್ಕಳಿಗೆ ಸೈಕಲ್ ವಿತರಣೆ

ಬಿ.ಕೆ.ಗುಪ್ತಾ ಪ್ರೌಢಶಾಲೆ ಮಕ್ಕಳಿಗೆ ಸೈಕಲ್ ವಿತರಣೆ   Bicycle distribution to children of B.K. Gupta High School

            ರಾಣೇಬೆನ್ನೂರು  14:  ಎಲ್ಲ ದಾನಗಳಿಗಿಂತಲೂ ಅತ್ಯಂತ ಶ್ರೇಷ್ಠವಾದಧಾನ. ವಿದ್ಯಾ ಧಾನವಾಗಿದೆ. ಇಂದಿನ ಮಕ್ಕಳಿಗೆ ಅನೇಕ ಸವಲತ್ತುಗಳು ಬೇಕಾಗಿದೆ ಬೇಕಾಗಿರುವ ಎಲ್ಲ ಅಗತ್ಯ ಸವಲತ್ತುಗಳನ್ನು ಪಡೆಯುವುದು ಎಲ್ಲರಿಗೂ ಸುಲಭ ಸಾಧ್ಯವಿಲ್ಲ. ಅದಕ್ಕಾಗಿ ಅತೀ ಬಡತನದಲ್ಲಿರುವ ಕೆಲವು ವಿದ್ಯಾರ್ಥಿಗಳಿಗೆ ಇನ್ನರ್ ವ್ಹಿಲ್ ಸಂಸ್ಥೆಯ ಪರವಾಗಿ ಬೈಸಿಕಲ್ ಕೊಡಲಾಗಿದೆ ಎಂದು ಸಂಸ್ಥೆಯ ಡಾ. ದೀಪಾಲಿ ಪುನೀತ್ ಹೇಳಿದರು. ಅವರು ಇಲ್ಲಿನ ಬಿ.ಕೆ.ಗುಪ್ತಾ ಪ್ರೌಢಶಾಲೆಯಲ್ಲಿ ಎಂ. ಎಂ.ಪಿ ಸೇವಾ ಸಂಸ್ಥೆ- ಇನ್ನರ್ ವ್ಹಿಲ್ ಸೇವಾ ಸಂಸ್ಥೆ ಆಯೋಜಿಸಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.               

       ಸಂಸ್ಥೆಯು ಕೊಡ ಮಾಡಿರುವ ಸೈಕಲ್ ಗಳನ್ನು ಸರಿಯಾದ ರೀತಿಯಲ್ಲಿ ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಎಂದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ   ಭಾರತಿ ಕುಮಾರ ಜಂಬಿಗಿ,   ಮೀನಾ ವಾಸುದೇವ ಗುಪ್ತಾ,  ನಿರ್ಮಲಾ ಪುನೀತ್,     ಪುಷ್ಪಾ ಮಾಳಗಿ, ಸದಸ್ಯರಾದ    ಮಂಗಳಗೌರಿ ಅರುಣಕುಮಾರ ಪೂಜಾರ,      ಸರೋಜಾ ಜಡೆ,   ರೂಪಾ ಶ್ರೀನಿವಾಸ್ ಕಾಕಿ, ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು