ಬೊಮ್ಮನಾಳ ಗ್ರಾಮದ ಭೈರೇಶ್ವರ, ಹನುಮಾನ ಜಾತ್ರಾ ಮಹೋತ್ಸವ
Bhaireshwar, Hanuman Jatra festival in Bommanal village
ರಾಯಬಾಗ 07 : ತಾಲೂಕಿನ ಬೊಮ್ಮನಾಳ ಗ್ರಾಮದ ಭೈರೇಶ್ವರ, ಹನುಮಾನ ಹಾಗೂ ಮಲ್ಲಿಕಾರ್ಜುನ ದೇವರುಗಳ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೆ ನಿಮಿತ್ತ ವಿವಿಧ ಶರ್ಯತ್ತುಗಳು ಜರುಗಿದವು, ವಿಜೇತರಿಗೆ ಕಮಿಟಿಯಿಂದ ಬಹುಮಾನ ವಿತರಿಸಲಾಯಿತು. ವಿವಿಧ ಶರ್ಯತ್ತುಗಳ ವಿವರ: ಕುದುರೆ ಗಾಡಿ ಶರ್ಯತ್ತು: ಸಾಂಗಲಿಯ ಜಾನಪ್ರೇಮಿ ಪ್ರಥಮ, ಬೇಡಿಕಿಹಾಳದ ವಿಶಾಲ ದೇಸಾಯಿ ದ್ವಿತೀಯ, ಬೊರಗಾಂವದ ಚಂದು ತೃತೀಯ, ಭಿರಡಿಯ ಮಹಾದೇವ ಇಟೇಕರಿ ಚತುರ್ಥ ಬಹುಮಾನ ಪಡೆದರು.ಕುದುರೆ ಶರ್ಯತ್ತು: ಕುಮಾರ ಪೂಜಾರಿ ಪ್ರಥಮ, ಪ್ರಶಾಂತ ಅಪ್ಪು ದ್ವಿತೀಯ, ಅಕ್ಷಯ ರಾಯಬಾಗ ತೃತೀಯ ಹಾಗೂ ಸುರೇಶ ಚಿಂಚಲಿ ಚತುರ್ಥ ಬಹುಮಾನ ಪಡೆದರು.ಸೈಕಲ್ ಶರ್ಯತ್ತು: ದರ್ಶನ ದೇಸಾಯಿ ಪ್ರಥಮ, ಮಾರುತಿ ಬಡಿಗೋಳ ದ್ವಿತೀಯ, ಬಾಳು ಹಿರೇಮಠ ತೃತೀಯ ಬಹುಮಾನ ಪಡೆದರು.
ಓಡುವ ಶರ್ಯತ್ತು: ಪರಶುರಾಮ ಹಸರೆ ಪ್ರಥಮ, ಪರಮಾನಂದ ಮಸರಗುಪ್ಪಿ ದ್ವಿತೀಯ, ಕುಮಾರ ಬಿದರಿ ತೃತೀಯ ಬಹುಮಾನ ಪಡೆದರು.ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸತೀಶ ಬಾಗಿ, ಶಿವಾನಂದ ಪಾಟೀಲ, ರಮೇಶ ಪಾಟೀಲ, ಕಲ್ಮೇಶ ಪಾಟೀಲ, ಸಾತಗೌಡ ಪಾಟೀಲ, ಅರುಣ ವಡ್ಡರ, ಧರೆಪ್ಪ ಚೌಗಲಾ, ಬಾಬು ಕರಿಹೋಳಿ, ಸಂತೋಷ ಪಾಟೀಲ, ಈಶ್ವರ ಪಾಟೀಲ, ಅಲಿಸಾಬ ನದಾಫ, ನಿಂಗೌಡ ಪಾಟೀಲ ಹಾಗೂ ಕಮಿಟಿ ಸದಸ್ಯರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 