ಶಿಕ್ಷಣದೊಂದಿಗೆ ಉತ್ತಮ ಪ್ರಜೆಗಳಾಗಿ: ಅಧ್ಯಕ್ಷ ಮಳೆಕಾರ್
ಲೋಕದರ್ಶನ ವರದಿ
ಕಂಪ್ಲಿ25: ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪೋಷಕರು ಜಾಗೃತಿವಹಿಸಬೇಕು ಎಂದರು ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಅಂಜಿನಪ್ಪ ಮಳೆಕಾರ ಹೇಳಿದರು.
ತಾಲೂಕಿನ ನೇಕಾರ ಸಮುದಾಯ ಒಕ್ಕೂಟದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಜೀವೇಶ್ವರ ಜಯಂತ್ಯೋತ್ಸವದಲ್ಲಿ ಜೀವೇಶ್ವರ ಅವರ ಮಂತ್ರ ಪಠಣದ ಪೂಜೆ ನಂತರ ಮಾತನಾಡಿ ಜೀವನದ ಆಧಾರಕ್ಕೆ ಜೀವೇಶ್ವರ ಅವರ ಆದರ್ಶ ಪ್ರೇರಣೆಗಳು ಮಾರ್ಗವಾಗಿವೆ. ಸ್ವಕುಳಸಾಳಿ ಸಮಾಜದವರು ಒಗ್ಗಟ್ಟಿದೊಂದಿಗೆ ಸಕರ್ಾರದ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.
ನಂತರ ಮುಖ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ಸಮಾಜದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರವಿದೆ. ಜೀವೇಶ್ವರ ಅವರ ಸ್ಮರಣೆಯೊಂದಿಗೆ ನೆಮ್ಮದಿ ಬದುಕು ಕಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಾದ ಅಂಕಿತ ಜಂಬುನಾಥ ಸರೋದೆ, ಸಹನ ಅಂಜಿನಪ್ಪ ಮಳೆಕಾರ್, ಪ್ರಿಯಾಂಕ ಕೃಷ್ಣ ಮಳೆಕಾರ್, ಹತ್ತನೆ ರಾಘವೇಂದ್ರ, ಶಿವಕುಮಾರ್, ಚಿಲ್ಲಾಳಗೆ ಶ್ರೀಖಂಡೆ ಅವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಮುಖ್ಯಾಧಿಕಾರಿ ವೆಂಕಟೇಶ್ಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರೋದೆ ಗುರುರಾಜ, ಮಲ್ಲಿಕಾಜರ್ುನ, ಮಳೆಕಾರ್ ನಾರಾಯಣಪ್ಪ, ಏಕಬೋಟೆ ಮಲ್ಲಿಕಾಜರ್ುನ, ಚಿಲ್ಲಾಳ ನಾಗರಾಜ, ಶಿವಕುಮಾರ್, ಭರತ್ಕುಮಾರ್ ಮಳೆಕಾರ್, ಅಂಬಲಡಗೆ ಈರಣ್ಣ, ಪ್ರಭಾಕರ್, ನಾಗರಾಜ, ರಾಮು ವಿರುಪಾಕ್ಷಿ, ಕೆಂದೂಳೆ ಶಿವಕುಮಾರ್, ರಾಜ, ಶ್ರೀಖಂಡೆ ಪಕ್ಕೀರಪ್ಪ, ಪ್ರಕಾಶ್, ಮಂಜುನಾಥ, ಸರೋದೆ ರಾದಾಬಾಯಿ, ಶ್ರೀದೇವಿ, ಲತಾ, ಗೀತಾ, ಸರಸ್ವತಿ ಮಳೆಕಾರ್, ಶ್ರೀಖಂಡೆ ಸುಭದ್ರಮ್ಮ, ನೀಲಮ್ಮ, ಸುಮ, ಸರಸ್ವತಿ ಏಡಕೆ, ಮಳೆಕಾರ್ ರುಕ್ಮಿಣಿ, ಲಕ್ಷ್ಮಿ, ವಾಣಿ, ಏಕಬೋಟೆ ನಿರ್ಮಲ, ಚಿಲ್ಲಾಳ ಚಂದ್ರಕಲಾ, ಲಲಿತಾ, ಮೀನಾಕ್ಷಿ ಸೇರಿದಂತೆ ಅನೇಕರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 