ಬೆಣ್ಣಿಹಳ್ಳಿ ಇಂಚಗೇರಿ ಮಾಧವಾನಂದ ಮಠಕ್ಕೆ 10 ಲಕ್ಷ ರೂ. ಅನುದಾನ: ಈರಣ್ಣಾ ಕಡಾಡಿ
Bennihalli Inchageri Madhavananda Matha gets Rs. 10 lakh grant: Iranna Kadadi
ಚಿಕ್ಕೋಡಿ 31: ಬೆಣ್ಣಿಹಳ್ಳಿಯ ಇಂಚಗೇರಿ ಮಾಧವಾನಂದ ಮಠದ ಪ್ರಸಾದ ನಿಲಯ ನಿರ್ಮಾಣಕ್ಕಾಗಿ ಸಂಸದರ ಅನುದಾನದಲ್ಲಿ 10 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಬೆಣ್ಣಿಹಳ್ಳಿಯ ಇಂಚಗೇರಿ ಮಾಧವಾನಂದ ಮಠದ ಪ್ರಸಾದ ನಿಲಯ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. ಬೆಣ್ಣಿಹಳ್ಳಿಯ ಸಾರ್ವಜನಿಕ ಉಪಯೋಗಕ್ಕಾಗಿ ಈ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಆಧ್ಯಾತ್ಮವೆಂದರೆ ಎಲ್ಲವನ್ನೂ ಮರೆತು ಭಕ್ತಿಯಲ್ಲಿ ಮಿಂದೆಳುವುದು. ದೇಶದ ವಿಭಿನ್ನ ಸಂಸ್ಕೃತಿಗಳಲ್ಲಿಯೂ ಏಕತೆ ಕಾಣಬಹುದು. ನೂರಾರು ಪರಂಪರೆಗಳಿದ್ದರೂ ತಿರುಳು ಒಂದೇ ಶಾಂತಿ, ಸಹಜ ಜೀವನ. ಸಂಪ್ರದಾಯ ಬೇರೆಯಾದರೂ ಎಲ್ಲರ ಉದ್ದೇಶ ಒಂದೇ ಧರ್ಮ. ಜೀವನದಲ್ಲಿ ಭಕ್ತಿ ಅಳವಡಿಸಿಕೊಂಡು ಪುಣ್ಯದ ದಾರಿಯಲ್ಲಿ ಸಾಗಲು ಆಧ್ಯಾತ್ಮಿಕ ಒಳ್ಳೆಯ ಮಾರ್ಗ ಎಂದರು.
ಮಾಜಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ ಮಾತನಾಡಿ, ಇಂಚಗೇರಿ ಸಂಪ್ರದಾಯ ಮಠಗಳ ಸೇವಾ ಚಟುವಟಿಕೆಗಳನ್ನು ಕೊಂಡಾಡುವ ಮೂಲಕ ಪ್ರಸಾದ ನಿಲಯಕ್ಕೆ ಅನುದಾನ ನೀಡಿರುವ ಈರಣ್ಣಾ ಕಡಾಡಿ ಅವರನ್ನು ಅಭಿನಂಧಿಸಿ ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಿ ಸಮಾಜ ಸೇವೆ ಮಾಡಬೇಕು ಎಂದರು.
ಇಂಚಗೇರಿಯ ಮುಕುಂದ ಮಹಾರಾಜರು, ಬೆಳವಿಯ ಮೃತ್ಯುಂಜಯ ಮಹಾರಾಜರು, ರಾಮಣ್ಣಾ ಮಹಾರಾಜರು, ಅಪ್ಪಾಸಾಹೇಬ ಮಹಾರಾಜರು, ಸದಾಶಿವ ಮಹಾರಾಜರು, ನ್ಯಾಯವಾದಿ ಎಂ.ಐ.ಬೆಂಡವಾಡೆ ಸೇರಿದಂತೆ ಅನೇಕರು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 