ಬಳ್ಳಾರಿ: ಉಚಿತ ಮಕ್ಕಳ ತಪಾಸಣಾ ಶಿಬಿರ
ಲೋಕದರ್ಶನ ವರದಿ
ಬಳ್ಳಾರಿ 23: ನಗರದ ಕಪ್ಪಗಲ್ ರಸ್ತೆಯಲ್ಲಿರುವ ಕಿತ್ತೂರು ರಾಣಿಚೆನ್ನಮ್ಮ ಆವರಣದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೈನ್ಬೋ ಮಕ್ಕಳ ಆಸ್ಪತ್ರೆ ಮಾರತ್ಹಳ್ಳಿ ಬೆಂಗಳೂರು ಅವರು ಇಂಡಿಯನ್ ಮೆಡಿಕಲ್ ಆಸೋಷಿಯನ್ ಸಹಯೋಗದೊಂದಿಗೆ ಬೆಳಗ್ಗೆ 9 ರಿಂದ ಮದ್ಯಾಹ್ನ 03 ಗಂಟೆಯವರಗೆ ಇದೇ ಮೊದಲ ಬಾರಿಗೆ 360ಕ್ಕೂ ಹೆಚ್ಚು ಮಕ್ಕಳ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು.
ಈ ಮಕ್ಕಳಲ್ಲಿ ಉಂಟಾಗುವ ಪೀಡಿಯಾಟ್ರಿಕ್, ಹೆಮೆಟೊ ಅಂಕಾಲಜಿ, ಪೀಡಿಯಾಟ್ರಿಕ್, ನೆಪ್ರೋಲಾಜಿ, ಪೀಡಿಯಾಟ್ರಿಕ್ ಆರಥೋಪೆಡಿಕ್ಸ್, ಯೂರೋಲಾಜಿ, ಇ ಎನ್ ಟಿ, ನವಜಾತ ಮತ್ತು ಮಕ್ಕಳ ಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವಾರು ರೋಗಗಳಿಗೆ ವಿವಿಧ ಬಗೆಯ ವೈದ್ಯರ ತಂಡ ಬೆಂಗಳೂರು ಇವರು ತಪಾಸಣಾ ನಡೆಸಿದರು.
ಈ ಶಿಬಿರವನ್ನು ಐಎಂಎ ಕಾರ್ಯದರ್ಶಿ ಡಾ.ಭರತ್, ಸಹಕಾರ್ಯದರ್ಶಿ ಬಿ.ಕೆ.ಎಸ್.ಶ್ರೀಕಾಂತ್, ಸೇರಿದಂತೆ ಹಲವಾರು ಬಳ್ಳಾರಿಯ ನುರಿತ ವೈದ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವೈದ್ಯರುಗಳಾದ ಡಾ.ಕವಿತ ಭಟ್, ಡಾ.ಲೀಲಾ ಬಾಲಚಂದ್ರ, ಡಾ.ಮನುಚೌದರಿ, ಡಾ.ಅನಿಲ್ ಪಾಂಡು, ಡಾ.ಹಕ್ಷಿತ, ಸೇರಿಂದತೆ ರೈನ್ಬೋ ಮಕ್ಕಳ ಆಸ್ಪತ್ರೆಯ ತಂಡವು ಸಂಪೂರ್ಣವಾಗಿ ಮಕ್ಕಳಲ್ಲಿರುವ ಕಾಯಿಲೆಗಳನ್ನು ಪರಿಕ್ಷಿಸಿ ಅದರಲ್ಲಿ ತುರ್ತು ಪರಿಸ್ಥಿತಿಯಲ್ಲಿರು ಮಕ್ಕಳನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಪರಿಕ್ಷಿಸಿ ಅದರಲ್ಲಿ ತುರ್ತು ಪರಿಸ್ಥಿತಿಯಲ್ಲಿರು 12 ಮಕ್ಕಳನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದು ವೈದ್ಯರು ನಮ್ಮ ಪ್ರತಿನಿಧಿಗೆ ವಿವರಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 