ವೀರ ಕನ್ನಡಿ ಪ್ರಶಸ್ತಿಗೆ ಬೀರ​ಪ್ಪ ಅಂಡಗಿ ಆಯ್ಕೆ

ವೀರ ಕನ್ನಡಿ ಪ್ರಶಸ್ತಿಗೆ ಬೀರ​ಪ್ಪ ಅಂಡಗಿ ಆಯ್ಕೆ Beerappa Andagi selected for Veera Kannadi Award

ಕೊಪ್ಪಳ 29: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ವಿಕಲಚೇತನ ನೌಕರರ ಹಾಗೂ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರ​ಪ್ಪ ಅಂಡಗಿ ಅವರಿಗೆ ಜೀ ಕನ್ನಡ ಸುದ್ದಿ ವಾಹಿತಿಯು ನೀಡುವ ವೀರ ಕನ್ನಡಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ವಿಕಲಚೇತನ ಮತ್ತು ಸರಕಾರಿ ನೌಕರರ ಹಾಗೂ ಶಿಕ್ಷಕರ ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಸೌಲಭ್ಯಗಳಿಗಾಗಿ ಮಾಡಿದ ಹೋರಾಟವನ್ನು ಗುರುತಿಸಿ ಪ್ರಶ್ತಿಗೆ ಆಯ್ಕೆ ಮಾಡಲಾಗಿದ್ದು,ಡಿಸೆಂಬರ್ 4 ರ ಗುರುವಾರ ಬೆಂಗಳೂರು ನಗರದ ದಿ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.