ಲೋಕದರ್ಶನವರದಿ
ಶಿಗ್ಗಾವಿ : ಗುರುವಿನ ನಾಮಸ್ಮರಣೆ, ಗುರುಗಳ ವಾಣಿ ಆಲಿಸುವದರಿಂದ ಮನುಷ್ಯನಲ್ಲಿ ಅಡಗಿರುವ ಅಂಧಕಾರವನ್ನು ಹೊಡೆದೊಡಿಸಬಹುದಾಗಿದೆ ಎಂದು ಅರಳಲೆಮಠದ ರೇವಣಸಿದ್ದೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಗೃಹ ಮಂಡಳಿಯ ಶಿರಡಿ ಸಾಯಿ ಮಂದಿರದಲ್ಲಿ ಕಾತರ್ಿಕೋತ್ಸವದ ಅಂಗವಾಗಿ ನಡದ ಸಹಶ್ರ ದೀಪೋತ್ಸವಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಜಗದ ಕತ್ತಲನ್ನು ಕಳೆಯಲು ಜ್ಯೋತಿ ಬೆಳಗಿಸುವ ಹಾಗೆ ಮನುಷ್ಯನ ಅಂತರಾಳದಲ್ಲಿ ಅಡಗಿರುವ ದುಗರ್ುಣಗಳನ್ನು ಕಳೆದುಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನದಲ್ಲಿ ನಡೆಯುವ ಅವಶ್ಯಕತೆಯಿದೆ ಎಂದು ಹೇಳಿದರು.
ದೀಪೋತ್ಸವಕ್ಕೆ ಹರಿದುಬಂದ ಭಕ್ತ ಜನಸಾಗರ ಶ್ರೀಗಳು ಬೆಳಗಿಸಿದ ಜ್ಯೋತಿಯಿಂದ ಮತ್ತೊಂದು ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾತರ್ಿಕೋತ್ಸವಕ್ಕೆ ಮೆರಗು ನೀಡಿದರು. ತನ್ನಿಮಿತ್ಯ ಶಿರಡಿ ಸಾಯಿ ಬಾಬಾರವರ ಮೂತರ್ಿಯನ್ನು ಜ್ಯೋತಿಗಳಿಂದ ಅಲಂಕರಿಸಿ ವಿಷೇಶ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಭಕ್ತರಿಂದ ಕೀರ್ತನೆ ಬಾಬಾರವರ ನಾಮಸ್ಮರಣೆ ಸಹಶ್ರಮಾಲಿಕೆ ಭಜನೆ ಕಾರ್ಯಕ್ರಮಗಳು ನಡೆದವು. ನಂತರ ಮಹಾ ಪ್ರಸಾದ ಸೇವೆ ನಡೆಯಿತು.
ಶಿರಡಿ ಸೇವಾ ಸಮಿತಿ ಅಧ್ಯಕ್ಷ ರವಿ ವೆಣರ್ೇಕರ, ಮಂಜುನಾಥ ಕೂಲಿ, ಮಂಜುನಾಥ ವಳಗೇರಿ, ರವಿ ಕುರಗೋಡಿ, ವೆಂಕಟೇಶ ದೈವಜ್ಞ, ಸತೀಷ ವಳಗೇರಿ, ಚಂದ್ರಶೇಖರ ಕೋರಿ, ಸಂದೀಪ ವೆಣರ್ೇಕರ, ರಾಘವೇಂದ್ರ ದೈವಜ್ಞ, ಚಂದ್ರು ರಾಯ್ಕರ, ಬಸವರಾಜ ನರೇಗಲ್, ಮಂಜುನಾಥಗೌಡ್ರ ಪಾಟೀಲ, ಪರಶುರಾಮ ಜೋಗಿನ, ಪ್ರಬಾಕರ ರಾಯ್ಕರ, ವಿಶ್ವನಾಥ ದೈವಜ್ಞ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.