ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ದರಾಗಿರಿ : ಶಾಸಕ ಪಠಾಣ
Be committed to the development of Anjuman organizations: MLA Pathana
ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ದರಾಗಿರಿ : ಶಾಸಕ ಪಠಾಣ
ಶಿಗ್ಗಾವಿ 21 : ಸಮಾಜದ ಸೇವೆ ಮಾಡಲು ಆ ಭಗವಂತ ಎಲ್ಲರಿಗೂ ಒಳ್ಳೆಯ ಅವಕಾಶ ಕೊಟ್ಟಿದ್ದಾನೆ ಅದನ್ನು ಸದುಪಯೋಗ ಪಡಿಸಿಕೊಂಡು ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ದರಾಗಿರಿ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದಲ್ಲಿ ನಡೆದ ಅಂಜುಮನ್-ಎ-ಇಸ್ಲಾಂ ಕಮಿಟಿ ಆಡಳಿತ ಮಂಡಳಿ ಚುನಾವಣೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಹಿ ತಿನಿಸಿ ಸನ್ಮಾನಿಸಿ ಮಾತನಾಡಿದ ಅವರು ಈ ಹಿಂದೆ ಇದ್ದ ಅಂಜುಮನ್ ಪದಾಧಿಕಾರಿಗಳಿಗೆ ಆಡಳಿತಾತ್ಮಕವಾಗಿ ಶಾಸಕರ ಸಂಪೂರ್ಣ ಬೆಂಬಲವಿರದ ಕಾರಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಹಾಗೂ ನಮ್ಮ ನಾಯಕರಾದ ಬಿ.ಝಡ್,ಜಮೀರ ಅಹ್ಮದ್ ಸಚಿವರಿರುವ ಕಾರಣ ಹೆಚ್ಚಿನ ಅನುಧಾನ ತರುವ ಜವಾಬ್ದಾರಿ ನನ್ನದು ಆದರೆ ನೀವೇಲ್ಲರೂ ಒಗ್ಗಟ್ಟಿನಿಂದ ಅಂದರೆ ಹಿಂದಿನ ಹಾಗೂ ಈಗ ಆಯ್ಕೆಯಾದ ಅಭ್ಯರ್ಥಿಗಳು ಸೇರಿ ಉತ್ತಮ ಕಾರ್ಯವನ್ನು ಮಾಡೋಣ ಹಾಗೂ ಉತ್ಸಾಹಿ ಯುವಕರ ಪಡೆ ಇರುವ ಕಾರಣ ಬರುವ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಿ ಇತರರಿಗೆ ಮಾದರಿಯಾಗೋಣ ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ, ಗೌಸಖಾನ ಮುನಸಿ, ಮುನ್ನಾ ಲಕ್ಷ್ಮೇಶ್ವರ, ಮುಕ್ತಾರಖಾನ ತಿಮ್ಮಾಪೂರ, ಚಂದ್ರು ಕೊಡ್ಲಿವಾಡ್, ಸುಲೇಮಾನ ಖಾಜೇಖಾನವರ, ಅಹ್ಮದಬಾಷಾ ಗುಲಾಮುದ್ದೀನ ಸೇರಿದಂತೆ ಆಯ್ಕೆಯಾದ ಅಭ್ಯರ್ಥಿಗಳಾದಸಲೀಂ ಅಹಮದ್ ಫರೋಕಿ, ಖಾಜಾ ಮೈನುದ್ದೀನ್ ಶ್ಯಾಬಾಳ , ಅಬ್ದುಲ್ ರೆಹಮಾನ್ ತೋಕಲ್ಲಿ , ಅಜೀಮಖಾನ್ ನಾಗಡ್ , ಮೊಹಮ್ಮದ್ ಜಾಫರ್ ನಿರ್ಮಣಿ , ಮೊಹಮ್ಮದ್ ಗೌಸ ಸವಣೂರ , ಆಫ್ಟಬ್ ಕಳಸ , ಮೊಹಮ್ಮದ್ ಖಾಜೇಖಾನವರ್ , ಮೌಲಾಲಿ ದೊಡ್ಮನಿ , ಲಿಯಾಕ್ತ್ ಅಹ್ಮದ್ ಭಮ್ಮೀಗಟ್ಟಿ , ಖಾಜಾ ಮೈನುದ್ದೀನ್ ಚೂಡಿದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 