ಬಸವರಾಜ ಜವಳಗಟ್ಟಿಗೆ ಪ್ರತಿಷ್ಠಿತ ಸ್ರಾಜ್ಯ ಯುವ ಪ್ರಶಸ್ತಿ

ಬಸವರಾಜ ಜವಳಗಟ್ಟಿಗೆ ಪ್ರತಿಷ್ಠಿತ ಸ್ರಾಜ್ಯ ಯುವ ಪ್ರಶಸ್ತಿ Basavaraja Javalagatti receives prestigious State Youth Award

        ಶಿಗ್ಗಾವಿ 21 : ಪಟ್ಟಣದ ಬಸವರಾಜ ಜವಳಗಟ್ಟಿ ಅವರ ಸಾಮಾಜಿಕ ಕಾಳಜಿ ಹಾಗೂ ನಿಸ್ವಾರ್ಥ ಸೇವೆಗಾಗಿ ಕರ್ನಾಟಕ ರಾಜ್ಯ ಯುವ ಸಂಘಗಳ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಒಕ್ಕೂಟ 2025-26ನೇ ಸಾಲಿನ ಪ್ರತಿಷ್ಠಿತ ಸ್ರಾಜ್ಯ ಯುವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಜವಳಗಟ್ಟಿ ಅವರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಡಾಽ ಎಸ್‌.ಬಾಲಾಜಿ, ರಾಜ್ಯ ಕಾರ್ಯದರ್ಶಿ ಸುರೇಶ ರೈ ಸೂಡಿಮುಳ್ಳು, ಸುಭ್ರಮಣ್ಯ ಕಡಂಬಾರ ಸೇರಿದಂತೆ ಇತರರಿದ್ದರು.