ಪತ್ರಕರ್ತ ಸಿಂಗೇಗೋಳಗೆ ಬಸವ ಚೇತನ ಪ್ರಶಸ್ತಿ: ಸಂತಸ ವ್ಯಕ್ತಪಡಿಸಿದ ಕಿವಡೆ
Basava Chetana award for journalist Singegola
ಇಂಡಿ 09: ಪತ್ರಿಕಾ ರಂಗದಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ ಈ ಭಾಗದ ಯುವ ನೇತಾರ ಪತ್ರಕರ್ತ ಮಿತ್ರ ಖಾಜು ಸಿಂಗೇಗೋಳ ಅವರಿಗೆ ರಾಜ್ಯ ಮಟ್ಟದ ಬಸವ ಚೇತನ ನೀಡಿ ಗೌರವಿಸಿದ್ದು ನಮಗೆಲ್ಲರಿಗೂ ಸಂತಸ ತಂದಿದೆ ಎಂದು ಇಂಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿವಡೆ ಹೇಳಿದ್ದಾರೆ.
ವಿಜಯಪುರದ ಅಮ್ಮಾ ಫೌಂಡೇಷನ್ ಎಲೆ ಮರಿಯ ಕಾಯಿಯಂತೆ ದಶಕದಿಂದ ವರದಿಗಾರರಾಗಿ ಪ್ರಸ್ತುತ ಪ್ರಧಾನ ಸಂಪಾದಕರಾಗಿ ಮಾಧ್ಯಮ ಕ್ಷೇತ್ರದಲ್ಲಿ ದಕ್ಷ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಖಾಜು ಸಿಂಗೇಗೋಳ ಅವರ ಕಾರ್ಯವೈಖರಿ ಗುರುತಿಸಿ ರಾಜ್ಯ ಮಟ್ಟದ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳು ಉಳ್ಳವರ ಪಾಲಾಗುತ್ತಿರುವ ಇಂದಿನ ಕಾಲದಲ್ಲಿ ಸಾದಾ ಸರಳ ವ್ಯಕ್ತಿತ್ವದ ಶ್ರಮಜೀವಿ ಖಾಜು ಸಿಂಗೆಗೋಳ ಅವರ ಆಯ್ಕೆಯಿಂದ ಪ್ರಶಸ್ತಿಯ ಗೌರವ ಹೆಚ್ಚಿದಂತಾಗಿದೆ ಅಂದರೆ ಅತಿಶೋಕ್ತಿಯಲ್ಲ. ಬಡತನದಲ್ಲಿ ಹುಟ್ಟಿ ಬೆಳೆದು ನಿಸ್ಪಕ್ಷಪಾತ ಕಾರ್ಯ, ಶ್ರದ್ಧೆ, ಪ್ರಾಮಾಣಿಕತೆ ಆಸ್ತಿ ಮಾಡಿಕೊಂಡು ಈ ಭಾಗದ ಮಾದರಿ ಪತ್ರಕರ್ತರು ಎನಿಸಿಕೊಂಡಿದ್ದಾರೆ.
ಪ್ರತಿಭಾವಂತ ಕ್ರಿಯಾಶೀಲ ಯುವ ಪತ್ರಕರ್ತ ಸಿಂಗೇಗೊಳ್ ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿ ಬರಲಿ ಮಾಧ್ಯಮ ರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮೆಲ್ಲರ ಆಶಾ ಆಗಿದೆ ಎಂದು ಮಲ್ಲಿಕಾರ್ಜುನ ಕಿವಡೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 