ವಿಮೋಚನಾ ಯುದ್ಧ ಹುತಾತ್ಮರಿಗೆ ಬಾಂಗ್ಲಾ ಅಧ್ಯಕ್ಷ, ಪ್ರಧಾನಿಯಿಂದ ಗೌರವ ನಮನ
ಡಾಕಾ, ಡಿ 16 ಬಾಂಗ್ಲಾದೇಶ
ವಿಮೋಚನೆಯ 49ನೇ ವಾರ್ಷಿಕೋತ್ಸವ ಅಂಗವಾಗಿ ಅಲ್ಲಿನ ಅಧ್ಯಕ್ಷ ಅಬ್ದುಲ್ ಹಮೀದ್ ಮತ್ತು ಪ್ರಧಾನಿ ಶೇಖ್
ಹಸೀನಾ ಅವರು ಸೋಮವಾರ ನಗರದ ಹೊರವಲಯದ ಸವಾರ್ ನಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಲ್ಲಿ ವಿಮೋಚನಾ
ಯುದ್ಧ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಸ್ಮಾರಕದಲ್ಲಿ ಹೂಗುಚ್ಛವಿರಿಸಿದ ನಂತರ 1971ರ ವಿಮೋಚನಾ ಯುದ್ಧದಲ್ಲಿ ಹುತಾತ್ಮರಾದ ಯೋಧರ
ಗೌರವಾರ್ಥ ಅಧ್ಯಕ್ಷರು ಹಾಗೂ ಪ್ರಧಾನಿ ಕೆಲ ನಿಮಿಷ ಮೌನ ಆಚರಿಸಿದರು. ಬಾಂಗ್ಲಾದೇಶದ ಸೇನೆ, ವಾಯುಪಡೆ
ಮತ್ತು ನೌಕಾಪಡೆ ಸೇನಾಧಿಕಾರಿಗಳು ಮತ್ತು ಪಡೆಗಳಿಂದ ಗೌರವವಂದನೆ ಸಲ್ಲಿಸಲಾಯಿತು. ಆಡಳಿತಾರೂಢ ಅವಾಮಿ
ಲೀಗ್ನ ಅಧ್ಯಕ್ಷರೂ ಆದ ಶೇಖ್ ಹಸೀನಾ ರಾಷ್ಟ್ರೀಯ ಹುತಾತ್ಮರ ಸ್ಮಾರಕದಲ್ಲಿ ಪಕ್ಷದ ಪರವಾಗಿ ಮತ್ತೊಮ್ಮೆ
ಹೂಗುಚ್ಛವಿರಿಸಿ ಗೌರವ ಸಲ್ಲಿಸಿದರು.ವಿಮೋಚನಾ ಯುದ್ಧದಲ್ಲಿ ವಿಜಯದ ಸಂಕೇತವಾಗಿ ಈ ದಿನವನ್ನು ಬಾಂಗ್ಲಾದೇಶದಲ್ಲಿ
ವಿಜಯ ದಿನವನ್ನು ಆಚರಿಸಲಾಗುತ್ತಿದೆ. 1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ವಿಮೋಚನಾ ಯುದ್ಧದಲ್ಲಿ
2 ಲಕ್ಷ ಮಹಿಳೆಯರು ಹಾಗೂ 30ಲಕ್ಷ ಮಂದಿ ಪ್ರಾಣತ್ಯಾಗ ಮಾಡಿದ್ದರು. ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಬುರ್
ರೆಹಮಾನ್ ಅವರ ನಾಯಕತ್ವದಲ್ಲಿ 1971ರ ಇದೇ ದಿನ ಬಾಂಗ್ಲಾದೇಶ ಸ್ವತಂತ್ರ ದೇಶವಾಗಿ ಉದಯಿಸಿತು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 