ತಾಲೂಕು ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಬಾನೆಸರಕಾರ ಚಾಲನೆ

ತಾಲೂಕು ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಬಾನೆಸರಕಾರ ಚಾಲನೆ Banesarakar launches taluk level departmental sports meet

ರಾಯಬಾಗ, 31 ; ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರು ಕ್ರೀಡಾ ಮನೋಭಾವದಿಂದ ಆಡಬೇಕೆಂದು ಗಜಾನನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ ಬಾನೆಸರಕಾರ ಹೇಳಿದರು. 

ಶನಿವಾರ ತಾಲೂಕಿನ ಮೊರಬ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಉಪ ನಿರ್ದೇಶಕರು, ಶಾಲಾ ಶಿಕ್ಷಣ (ಪದವಿಪೂರ್ವ) ಚಿಕ್ಕೋಡಿ ಹಾಗೂ ಎಸ್‌.ಆರ್‌.ಬಾನೆಸರಕಾರ ಪದವಿಪೂರ್ವ ಕಾಲೇಜ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಸದೃಢವಾಗಲು ಸಾಧ್ಯ, ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೇ ಸರಿಯಾದ ನಿರ್ಣಯ ನೀಡಬೇಕೆಂದರು.  

ಡಿ.ಎಸ್‌.ನಾಯಿಕ, ಎನ್‌.ಎಸ್‌.ಚೌಗಲಾ, ಡಾ.ಸಿ.ಬಿ.ಕುಲಗೋಡ, ಅಶೋಕ ಕೊಪ್ಪದ, ಕುಮಾರ ಕಾನಡೆ, ಆಯ್‌.ಕೆ.ಅಕಿವಾಟ, ದಾದಪ್ಪ ರಾಮತೀರ್ಥ, ರುದ್ರೇಶ ಅಸೋದೆ ಹಾಗೂ ವಿದ್ಯಾರ್ಥಿಗಳು ಇದ್ದರು.