94ನೇ ದಿನದ ಕ್ವಿಟ್ ಬಲ್ಡೋಟ ಧರಣಿಗೆ ಬಾಮಸೆಫ್ ಬೆಂಬಲ
Bamsafe supports 94th day of Quit Baldota sit-in
ಕೊಪ್ಪಳ 01: ನಗರಸಭೆ ಆವರಣದ ಬಳಿ 94 ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಬಾಮಸೆಫ್ ರಾಜ್ಯ ಉಸ್ತುವಾರಿ ಗೋಪಿ ಬಳ್ಳಾರಿ ಅವರು ಬೆಂಬಲಿಸಿಮಾತನಾಡಿ, ಇದೊಂದು ಹೋರಾಟ ವಿಶಿಷ್ಟವಾದುದು. ಇಲ್ಲಿ ಜೀವ ಮತ್ತು ಆರೋಗ್ಯ ಉಳಿಸಿಕೊಳ್ಳಲು ಇಷ್ಟೊಂದು ಕಷ್ಟ ಪಡುತ್ತಿರುವಾಗ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದು ಸರಿಯಲ್ಲ. ಅಧಿಕಾರಿಗಳು ರಾಜಕಾರಣಿಗಳು ಜನರ ಕುಂದು ಕೊರತೆಗಳಿಗೆ ಕಿವಿಕೊಡದಿದ್ದಾಗ ಅವರ ಕೇಂದ್ರ ಸ್ಥಾನಗಳನ್ನು ಸುತ್ತುವರಿದು ಹೋರಾಟ ಮಾಡಬೇಕು.
ಅವರು ರಸ್ತೆಗಿಳಿಯಲು ಯೋಚನೆ ಮಾಡಬೇಕು. ಕ್ರಿಯಾಶೀಲ ಸಂಘಟನೆಗಳು, ಯುವಜನರು ದೃಢ ನಿಲುವು ತಳೆದು ಹೋರಾಟದ ಕಣಕ್ಕೆ ಧುಮುಕಬೇಕು. ನಮ್ಮ ಸಂಘಟನೆ ನೀವು ಕರೆದಾಗ ಬಂದು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಜನತೆಯ ಒಳಿತಿಗಾಗಿ ಹೋರಾಡುವ ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ ಎಂದರು. ಧರಣಿ ನೇತೃತ್ವವಹಿಸಿದ್ದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ್ ಗೋನಾಳ, ರಾಜಶೆಖರ ಏಳುಭಾವಿ, ಡಿಎಸ್ಎಸ್ ಮುಖಂಡ ನಿಂಗಪ್ಪ ಜಿ.ಎಸ್. ಬೆಳಕಲ್, ಗವಿಸಿದ್ದಪ್ಪ ಹಲಿಗಿ, ಸಂಜೀವಮೂರ್ತಿ ಬೇವಿನಗಿಡದ, ಕಾಶಪ್ಪ ಚಲವಾದಿ, ಮೂಕಪ್ಪ ಮೇಸ್ತ್ರಿ ಬಸಾಪುರ, ರತ್ನಮ್ಮ ದೊಡ್ಡಮನಿ, ಶಿವಪ್ಪ ಜೆಲ್ಲಿ, ಗಂಗಮ್ಮ ಮುಂಡರಗಿ, ಮೈಲಪ್ಪ ಮದಿನೂರು, ದ್ಯಾಮಣ್ಣ ಚಿಲವಾಡಗಿ ಮುಂತಾದವರು ಪಾಲ್ಗೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 