ಪೌರಕಾರ್ಮಿಕರ ಅನಿರ್ದಿಷ್ಟಾವದಿ ಮುಷ್ಕರಕ್ಕೆ: ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಬೆಂಬಲ
BJP leader Virupaksha Mamani supports indefinite strike of civil servants
ಸವದತ್ತಿ 29: ಯಲ್ಲಮ್ಮ ಪುರಸಭೆ ಪೌರ ಕಾರ್ಮಿಕರು ಎರಡನೇ ದಿನದ ಅನಿರ್ಧಿಷ್ಟಾವಧಿ ಪ್ರತಿಭಟನೆ ಬಿಜೆಪಿ ಮಂಡಳ ಅಧ್ಯಕ್ಷರು ವಿರೂಪಾಕ್ಷ ಮಾಮನಿ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಕಸ ವಿಲೇವಾರಿ, ವಾಹನ ಚಾಲಕರು, ಒಳ ಚರಂಡಿ ನಿರ್ವಹಣೆ ಹಾಗೂ ಕಛೇರಿ ಕಾರ್ಯಗಳು ಸ್ಥಗಿತದಿಂದ ಪೌರ ಕಾರ್ಮಿಕರು ಆರಂಭಿಸಿರುವ "ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ, ಅವರ ಬೇಡಿಕೆಗಳನ್ನು ಆಲಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಯಿತು.ವಿರೂಪಾಕ್ಷ ಮಾಮನಿ ಮಾತನಾಡಿ ಕಳೆದ 2 ದಿನಗಳಿಂದ ರಾಜ್ಯದ ಬಹುತೇಕ ಪೌರ ಕಾರ್ಮಿಕರ ಆಡಳಿತ ಸ್ತಬ್ಧವಾಗಿದ್ದು ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ, ದಾಖಲೆಗಳ ವಿತರಣೆ ಈ ರೀತಿ ದಿನ ನಿತ್ಯದ ಕೆಲಸ ಕಾರ್ಯಗಳು ನಿಂತುಹೋಗಿ ಸಾರ್ವಜನಿಕರು ಕಷ್ಟಪಡುವಂತಾಗಿದೆ ಸರಕಾರ ಕೂಡಲೇ ಪೌರಕಾರ್ಮಿಕರು ಕಷ್ಟಗಳಿಗೆ ಸ್ಪಂದಿಸುವ ಅವರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು ಅರ್ಜುನ ಅಮೋಜಿ, ವಿರೇಶ ಪ್ರಭುನವರ ಹಾಗೂ ಪ್ರಮುಖರು ಪ್ರಮೋದ ಕಾರದಗಿ, ಮಲ್ಲಿಕಾರ್ಜುನ ಬೀಳಗಿ, ಸುನೀಲ ಮಾಮನಿ ಹಾಗೂ ಪೌರ ಕಾರ್ಮಿಕರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು 