ಬರಗಾಲ ಎದುರಿಸುತ್ತಿರುವ ರೈತರ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ಬಿ.ಟಿ.ಚಂದ್ರಶೇಖರ್

ಬರಗಾಲ ಎದುರಿಸುತ್ತಿರುವ ರೈತರ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿದ ಬಿ.ಟಿ.ಚಂದ್ರಶೇಖರ್  B.T. Chandrashekhar visited the homes of drought-stricken farmers and boosted their morale


ಲಕ್ಷ್ಮೇಶ್ವರ, ಸೆ.16: ಶಿರಹಟ್ಟಿ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಕಳೆದ 8ಹಿ10 ತಿಂಗಳಿಂದ ಭೇಟಿ ನೀಡುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ 1008 ಬಡವರ ಕಲ್ಯಾಣೋತ್ಸವ ನೆರವೇರಿಸಿದ ಕಲ್ಯಾಣ ಪುರುಷ ಬಿ.ಟಿ. ಚಂದ್ರಶೇಖರ್ ಅವರು, ಗ್ರಾಮೀಣ ಭಾಗದ ರೈತರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.  

ಜಮೀನುಗಳಿಗೆ ತೆರಳುವ ರಸ್ತೆ, ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಅವುಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ.  

ಶುಕ್ರವಾರ ಶಿರಹಟ್ಟಿ ಮತಕ್ಷೇತ್ರದ ಬರಗಾಲ ಎದುರಿಸುತ್ತಿರುವ ರೈತರ ಮನೆಗಳಿಗೆ ತೆರಳಿದ ಬಿ.ಟಿ. ಚಂದ್ರಶೇಖರ್ ಅವರು, ರೈತರೊಂದಿಗೆ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬಿದರು. ಸಂಕಷ್ಟದ ಸಂದರ್ಭದಲ್ಲಿ ರೈತರೊಂದಿಗೆ ಸದಾ ಇರುವುದಾಗಿ ಭರವಸೆ ನೀಡುವ ಮೂಲಕ ಅವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದರು.