ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನಕ್ಕೆ ಆಯುರ್ವೇದದಿಂದ ಸಾಧ್ಯ : ಡಾ. ಸಂಜಯ ಕಡ್ಲಿಮಟ್ಟಿ

ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನಕ್ಕೆ ಆಯುರ್ವೇದದಿಂದ ಸಾಧ್ಯ : ಡಾ. ಸಂಜಯ ಕಡ್ಲಿಮಟ್ಟಿ Ayurveda is possible for physical, mental and spiritual balance: Dr. Sanjay Kadlimatti

ಲೋಕದರ್ಶನ ವರದಿ 

ವಿಜಯಪುರ 15 : ಆಯುರ್ವೇದವು ಸತ್ಯಯುಗ, ತ್ರೇತಾಯುಗ ದ್ವಾಪರಯುಗಳಿಂದ ಅಂದರೆ ಸಹಸ್ರಾರು ವರ್ಷ ಹಳೆಯದಾದ ಭಾರತೀಯ ಸಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದೆ. ಇದು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವುದಲ್ಲದೇ, ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನದ ಮೂಲಕ ಆರೋಗ್ಯಕ್ಕೆ ಜೀವನ ಶೈಲಿಯನ್ನು ಉತ್ತೇಜಿಸುವ ಜೀವನದ ವಿಜ್ಞಾನವಾಗಿದೆ ಎಂದು ಎಮ್‌.ಡಿ. ಆಯುರ್ವೇದಿಕ ಡಾ. ಸಂಜಯ ಎಮ್‌. ಕಡ್ಲಿಮಟ್ಟಿ ಪ್ರೊಪೇಸರ್ ಹಾಗೂ ಬಿ.ಎಲ್‌.ಡಿ.ಇ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯ ಮುಖ್ಯ ಅಧಿಕಾರಿಗಳು ನುಡಿದರು.  

ಅವರು ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರ ವತಿಯಿಂದ ಹಿರಿಯ ನಾಗರಿಕರಿಗಾಗಿ ವೀರಶೈವ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಆಹಾರ ನಿದ್ರೆ ಹಾಗೂ ಬ್ರಹ್ಮಚರ್ಯ ಇವು ಆಯುರ್ವೇದದ 3 ಮುಖ್ಯ ಸ್ಥಂಭಗಳು ಸಾತ್ವಿಕ ಆಹಾರವನ್ನು ನಿಯಮಿತ ಪ್ರಮಾಣ ಹಾಗೂ ಸಮಯದಲ್ಲಿ ಸೇವಿಸುವುದು ದೇಹಕ್ಕೆ ಹಿತಕರ ಆಯಾ ಪ್ರದೇಶದಲ್ಲಿ ಬೆಳೆಯುವ ಧಾನ್ಯಗಳು, ಹಣ್ಣುಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ ಎಂದರು.