ವಿಶ್ವ ಪರಿಸರ ದಿನಾಚರಣೆ ಸೈಕಲ್ ಜಾಥಾ ಮೂಲಕ ಅರಿವು

ವಿಶ್ವ ಪರಿಸರ ದಿನಾಚರಣೆ ಸೈಕಲ್ ಜಾಥಾ ಮೂಲಕ ಅರಿವು   Awareness through World Environment Day cycle rally

ಲಕ್ಷ್ಮೇಶ್ವರ" ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಮರಗಳನ್ನು ನಡೆವುದರ ಜೊತೆಗೆ ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಎಲ್ಲರೂ ವಹಿಸಿಕೊಳ್ಳಬೇಕು ಎಂದು ಶಿಗ್ಲಿ  ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು ಗ್ರಾಮದ ಹಿರಿಯ ಮುಖಂಡರಾದ ಯಲ್ಲಪ್ಪ ತಳವಾರ ಅವರು ಹೇಳಿದರು. ಅವರು ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮಂತರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸೈಕಲ್ ಜಾಥಾವನ್ನು ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಳಿಂದ ಪರಿಸರ ಮಾಲಿನ್ಯ, ಅರಣ್ಯ ನಾಶ ಹಾಗೂ ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಜಾಥಾ ಹೋಗುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವದು ಸಂತೋಷವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಿಗ್ಲಿ ಗ್ರಾಮದ ರಾಜರತ್ನ ಹುಲಗೂರ, ಮಂಜುನಾಥ ಶಂಭೋಜಿ, ಅಮರೇಶ್ವರ ಹುಲಗೂರ, ಜ್ಯೋತಿ ಕರ್ಜಗಿ.ವಿ.ಎ.ಪಾಟೀಲ ಇತರರು ಇದ್ದರು