ಮಿರಜ ಪಟ್ಟಣದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿ ಆಷಾಢ ಏಕಾದಶಿ ಸಂಪನ್ನ
Ashada Ekadashi Sampanna at Nirmala Autism and Learning Disability Education Center in Miraj Town
ಲೋಕದರ್ಶನ ವರದಿ
ಕಾಗವಾಡ 28 : ಮಹಾರಾಷ್ಟ್ರದ ಮಿರಜ ಪಟ್ಟಣದ ನಿರ್ಮಲ ಆಟಿಸಂ ಮತ್ತು ಕಲಿಕಾ ಅಂಗವೈಕಲ್ಯ ಶಿಕ್ಷಣ ಕೇಂದ್ರದಲ್ಲಿಯ ಮಕ್ಕಳಿಗ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಹಬ್ಬಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಅವರ ಸಾಮಾಜಿಕ ಭಾಗವಹಿಸುವಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಶನಿವಾರ ದಿ. 25 ರಂದು ಆಷಾಢ ಏಕಾದಶಿಯನ್ನು ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರದ ವಿಶೇಷ ಮಕ್ಕಳು ಸಾಂಪ್ರದಾಯಿಕ ವೇಷ ಭೂಷಣಗಳಲ್ಲಿ ಭಾಗವಹಿಸಿ, ಆಷಾಢ ಏಕಾದಶಿಯನ್ನು ಆನಂದಿಸಿದರು. ವಿಠ್ಠಲ-ರುಕ್ಮಿಣಿಯ ವೇಷ-ಭೂಷಣಗಳೊಂದಿಗೆ ಭಕ್ತಿಮಯ ವಾತಾವರಣದಲ್ಲಿ ಮಕ್ಕಳು ಸ್ವಯಂ ಪ್ರೇರಿತವಾಗಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ನಿರ್ಮಲ ಆಸ್ಪತ್ರೆಯ ನಿರ್ದೇಶಕ ಡಾ. ಚಂದ್ರಶೇಖರ ಹಳಿಂಗಲೆ, ಆಟಿಸಂ ಕೇಂದ್ರದ ಪ್ರಾಂಶುಪಾಲ ಡಾ. ಮಾಧುರಿ ವಾಂಗಪತಿ ಹಾಗೂ ಕೇಂದ್ರದ ಶಿಕ್ಷಕರು, ಚಿಕಿತ್ಸಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಆಷಾಢ ಏಕಾದಶಿಯ ನಿಮಿತ್ಯವಾಗಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮಕ್ಕಳ ಉತ್ಸಾಹದೊಂದಿಗೆ ಭಾಗವಹಿಸುವ ಮೂಲಕ ಸಂಪೂರ್ಣ ವಾತಾವರಣವು ಭಕ್ತಿಮಯವಾಗಿದ್ದು, ವಿಶೇಷವಾಗಿತ್ತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 