ಕಲಾ ನಡಿಗೆ ನಿಮ್ಮ ಬಳಿಗೆ ಕಾರ್ಯಕ್ರಮ

ಕಲಾ ನಡಿಗೆ ನಿಮ್ಮ ಬಳಿಗೆ ಕಾರ್ಯಕ್ರಮ Art Walk to You program

ಹಾವೇರಿ  22: ಕಲಾ ನಡಗೆ ನಿಮ್ಮ ಬಳಿಗೆ ಎಂಬ ವಿನೂತ ಕಾರ್ಯಕ್ರಮ  ರವಿವಾರ  ರಾಣೇಬೆನ್ನೂರು ತಾಲೂಕು  ದೇವರಗುಡ್ಡ ಪ್ರವಾಸಿತಾಣ ಶ್ರೀ ಮಾಲತೇಶ ಮಾಲಸಾಂಭಾ ವೇದಿಕೆಯಲ್ಲಿ ಜರುಗಿತು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶೇಖರ ಹಂಚಿನಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಮಾಲತೇಶ ಮೈಲಾರ ಲಿಂಗ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಗವಿಸಿದ್ದಪ್ಪ  ದ್ಯಾಮಣ್ಣವರ, ದೇವರಗುಡ್ಡ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಂಜುನಾಥ ವೇಷಗಾರ, ಉಪಸ್ಥಿತರಿದ್ದರು.  ಪರಶುರಾಮ ಬಣಕಾರ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ  ಕಾರ್ಯಕ್ರಮ, ಶಿವನಗೌಡ ಪಾಟೀಲ ಹಾಗೂ ಸಂಗಡಿಗರಿಂದ ಡೊಳ್ಳುಕುಣಿತ   ಕಾರ್ಯಕ್ರಮ ನಡೆಸಿಕೊಟ್ಟರು.