ರಾಯರ ಆರಾಧನಾ ಮಹೋತ್ಸವದಲ್ಲಿ ರಥೋತ್ಸವ
Aradhana Mahotsava: Athani news
ಅಥಣಿ, 12 ; ಶ್ರೀ ರಾಯರ ಮಠದ ವಿಜ್ರಂಭಣೆಯ ಆರಾಧನಾ ಮಹೋತ್ಸವಕ್ಕೆ ತೆರೆ. ಅಥಣಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಕೊನೆಯ ದಿನದ ಅಂಗವಾಗಿ ಸಾವಿರಾರು ಭಕ್ತರ ಜಯ ಘೋಷ, ಭಕ್ತಿ ಗೀತೆಗಳ, ಭಜನೆ, ದಾಸರ ಪದಗಳ, ನಡುವೆ ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು. ಮೂರು ದಿನಗಳ ಆರಾಧನಾ ಮಹೋತ್ಸವ ದಲ್ಲಿ ರಾಯರು ವೃಂದಾವನ ಸ್ವೀಕರಿಸಿದ ಆರಾಧನಾ ಮಹೋತ್ಸವದಲ್ಲಿ ವಿಜ್ರಂಭಣೆಯ ರಥೋತ್ಸವದ ಮೂಲಕ ಕೊನೆಗೊಂಡಿತು.
ಕೇದಿಗೆ, ಸೇವಂತಿ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಸೇರಿದಂತೆ ಅನೇಕ ವಿಧವಾದ ಹೂಗಳು, ಬಾಳೆಯ ದಿಂಡು, ತೆಂಗಿನ ಗರಿಗಳಿಂದ ಅಲಂಕೃತಗೊಂಡಿದ್ದ ರಥ ಭಕ್ತರ ಮನಸೂರೆ ಗೊಂಡಿತ್ತು. ಹೋಮ ಹವನಾದಿ, ಪೂರ್ಣಾಹುತಿ ನೀಡಿದ ನಂತರ ಪ್ರಾರಂಭಗೊಂಡ ರಥೋತ್ಸವ ತರುಣ ಭಕ್ತರ ಉತ್ಸಾಹ ಇಮ್ಮಡಿಗೊಳಿಸಿತ್ತು. ರಥಕ್ಕೆ ಟೆಂಗಿನ ಕಾಯಿ ಒಡೆದು ಉತ್ತತ್ತಿ, ಹಣ್ಣುಗಳನ್ನು ಅರ್ಿಸುತ್ತಿರುವುದು ಸಾಮಾನ್ಯವಾಗಿತ್ತು. ಪ್ರಮುಖವಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮುಂಬೈ, ಬೆಂಗಳೂರು, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಪುಣೆ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಿಂದ ಭಕ್ತರ ದಂಡು ಕೊನೆಯ ದಿನದ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿತ್ತು.
ರಥೋತ್ಸವ ಪ್ರಾರಂಭವಾಗುತ್ತಿದ್ದಂತೆಯೇ ತರುಣ ಭಕ್ತರಿಂದ ವಾಸುದೇವ ಹರಿ ಎನ್ನುವ ಘೋಷಣೆ ಮುಗಿಲು ಮುಟ್ಟುವಂತಿತ್ತು. ಶ್ರೀ ವಿಷ್ಣುತೀರ್ಥ ಭಜನಾ ಮಂಡಳ, ಶ್ರೀ ಸುಧಾ ಭಜನಾ ಮಂಡಳದ ಸದಸ್ಯೆಯರಿಂದ , ಮಾತೆಯರು, ತರುಣ ಭಕ್ತರು ಸೇರಿದಂತೆ ಚಿಕ್ಕ ಮಕ್ಕಳಿಂದ ಕೋಲಾಟ, ಫುಗಡಿಯಾಟ ಆಕರ್ಷಣೀಯವಾಗಿತ್ತು.
ತರುಣ ಭಕ್ತರಿಂದ ಬಾರೋ ರಾಘವೇಂದ್ರಾ, ಊರಿಗೆ ಬಂದರೆ ರಾಘವೇಂದ್ರ ನಮ್ಮ ಕೇರಿಗೂ ಬಾ ರಾಘವೇಂದ್ರ, ಅಥಣಿಯೇ ಇಂದೆಮಗೆ ಮಂತ್ರಾಲಯ ಹೀಗೆ ಹತ್ತಾರು ಭಕ್ತಿ ಗೀತೆಗಳನ್ನು ಹಾಡಿ ಗಾಯನ ಸೇವೆ ಸಲ್ಲಿಸಿದರು.
ರಥೋತ್ಸವದ ನಂತರ ಸಾವಿರಾರು ಭಕ್ತರಿಗೆ ನಡೆದ ಅನ್ನಪ್ರಸಾದ ವಿತರಣೆಗೆ ನೂರಾರು ತರುಣ ಭಕ್ತರು ಟೊಂಕ ಕಟ್ಟಿ ನಿಂತಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮೂರು ದಿನಗಳ ಆರಾಧನಾ ಮಹೋತ್ಸವದ ಮೂರು ದಿನಗಳಲ್ಲಿ ಯಾವುದೇ ಭೇದ ಭಾವ ಇಲ್ಲದೆ 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು. ಉತ್ಸವ ಸಮಿತಿ, ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 