ರೈತರಿಗೆ ಹೊಲಕ್ಕೆ ಹೋಗಲು ದಾರಿ ಒದಗಿಸಲು ಮನವಿ

Appeal to provide road facilities to farmers to reach their fields

ಬೆಳಗಾವಿ 09: ರೈತರಿಗೆ ಹೊಲಕ್ಕೆ ಹೋಗುವ ದಾರಿಯನ್ನು ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕಲಾರಕೊಪ್ಪ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಅರ​‍್ಿಸಿದರು. 

ಮನವಿಯಲ್ಲಿ ಹಿರೇಬಾಗೇವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಲಾರಕೊಪ್ಪ ರಸ್ತೆ ಪಕ್ಕದಲ್ಲಿ ಸುಮಾರು 20 ವರ್ಷಗಳಿಂದ ರೈತರು ಹೊಲಕ್ಕೆ ಹೋಗುವ ರಸ್ತೆಯನ್ನು ಉಪಯೋಗಿಸುತ್ತಿದ್ದು, ಸದರಿ ರೈತರಿಗೆ ಸರ್ವೇ ನಂಬರ 201ರ ಹೊಲದ ಮಾಲಿಕರು ತಕರಾರು ಮಾಡಿ ಈ ದಾರಿಯನ್ನು  ಬಂದ್ ಮಾಡಿಸಿದ್ದಾರೆ. ಇದರಿಂದ ಹೊಲಗಳಿಗೆ ಹೋಗಲು ದಾರಿಯಿಲ್ಲದ ಎತುಂಬಾ ತೊಂದರೆ ಆಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸ್ಥಳಕ್ಕ ಎಆಗಮಿಸಿ ಸ್ಥಾನಿಕ ತನಿಖೆ ಮಾಡಿ ಪರೀಶೀಲಿಸಿ ರೈತರಿಗೆ ಸುರಳಿತವಾಗಿ ಹೊಲಕ್ಕೆ ಹೋಗಲು ದಾರಿಯನ್ನು ಸುಗಮವಾಗಸಬೇಕೆಂದು ಮನವಿ ಮಾಡಲಾಗಿದೆ. 

 ಮನವಿ ಅರೆ​‍್ಣ ಕಾಲಕ್ಕೆ ಅಕಬರ ಪಾಟವಾಲೆ, ಇಮಾಮಸಾಬ ಭಾಗವಾನ್, ಪೀದಾಹುಸೇನ್ ಬಾಗವಾನ್ ಅಬ್ದುಲ್ ಕಯ್ಯಾದು ಪಾಟವಾಲೆ, ರಾಜಶೇಖರ ಸಾಲಿಮನಿ, ಮನೋಜ ಹುದಲಿ, ಶಿವಕುಮಾರ ಹುದಲಿ, ಬಸಲಿಂಗ ಕೊಪ್ಪದ, ಮಹಮ್ಮದ ಬಾಗವಾನ ಜಗ್ಲಿಸಾಬ್ ಪಾಟವಾಲೆ, ಇರ್ಫಾನ್ ಬಾಗವಾನ್ ಪಡೆಪ್ಪ ಕೊಪ್ಪದ ನಿಂಗಪ್ಪ ಕೊಪ್ಪದ ಮೊದಲಾದ ಅನೇಕರು ಇದ್ದರು.