ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಸಕ ಲಮಾಣಿಗೆ ಮನವಿ
Appeal to MLA Lamani demanding provision of basic facilities
ಲೋಕದರ್ಶನ ವರದಿ
ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಸಕ ಲಮಾಣಿಗೆ ಮನವಿ
ಹಾವೇರಿ 07 : ಬೀದಿ ದೀಪ, ನೀರಿನ ಚರಂಡಿ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಸಕ ರುದ್ರ್ಪ ಲಮಾಣಿ ಅವರಿಗೆ ಶಿವಲಿಂಗ ನಗರದ ಕುಂಬಾರಗುಂಡಿ ಕೊಳಗೇರಿ ನಿವಾಸಿಗಳು ಮನವಿ ಸಲ್ಲಿಸಿದರು.
ಕಳೆದ ಏಳೆಂಟು ದಶಕಗಳಿಂದ ಕುಂಬಾರಿಕೆ ಮಾಡುತ್ತ ಬಂದಿದ್ದೇವೆ. ಕುಲ ಕಸುಬಿನ ಜೊತೆಗೆ ವೃದ್ಧರನ್ನು ಮತ್ತು ಮಕ್ಕಳನ್ನು ಸಾಕುವುದು ದುಸ್ತರವಾಗಿದೆ. ಸಮರ್ಕ ವೈದ್ಯಕೀಯ ಚಿಕಿತ್ಸೆ, ಮಕ್ಕಳಿಗೆ ನೀರೀಕ್ಷಿತ ಶಿಕ್ಷಣ ಸೌಲಭ್ಯ ಸಿಗುತ್ತಿಲ್ಲ. ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರುದ್ರ್ಪ ಲಮಾಣಿ, ತಮ್ಮ ಬೇಡಿಕೆಯನ್ನು ಗಮನಿಸಿರುವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ. ಚುನಾವಣಾ ಸಂದರ್ಭದಲ್ಲಿ ತಮಗೆ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳುವೆ. ತಮ್ಮ ಭಾವನೆಗಳನ್ನು ಗೌರವಿಸುವುದು ನನ್ನ ಕರ್ತವ್ಯ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಕುಂಬಾರಗುಂಡಿ ನಿವಾಸಿಗಳಾದ ಆರ್.ಎಚ್. ಕುಂಬಾರ, ಸುರೇಶ ಕುಂಬಾರ, ಗುರುರಾಜ ಕುಂಬಾರ, ಹನುಮಂತಪ್ಪ ಕುಂಬಾರ, ಸುಭಾಷ್ ಕುಂಬಾರ, ತಿಮ್ಮಣ್ಣ ಕುಂಬಾರ, ಫಕ್ಕೀರ್ಪ ಕುಂಬಾರ, ಸುಮಾ ಕುಂಬಾರ, ನಾಗವ್ವ ಕುಂಬಾರ, ಲಕ್ಷ್ಮಕ್ಕ ಕುಂಬಾರ, ರೇಣುಕಾ ಕುಂಬಾರ, ಮಂಜುಳಾ ಕುಂಬಾರ, ವೀಣಾ ಕುಂಬಾರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 