ಅಪೂರ್ವ ವಡ್ಡರ ರಾಜ್ಯ ಮಟ್ಟಕ್ಕೆ ಆಯ್ಕೆ

ಅಪೂರ್ವ ವಡ್ಡರ ರಾಜ್ಯ ಮಟ್ಟಕ್ಕೆ ಆಯ್ಕೆ Apoorva Vaddara selected for state level


ದೇವರಹಿಪ್ಪರಗಿ 26: ಸ್ಥಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವರಹಿಪ್ಪರಗಿಯ ಅಪೂರ್ವ ವಡ್ಡರ ಕವನ ವಾಚನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.       ಇತ್ತಿಚೆಗೆ  ಬಸವ ಭಾರತಿ ವಿದ್ಯಾಪೀಠ ಹಾಗೂ ಪ್ರಕೃತಿ ಪ್ರಾಥಮಿಕ- ಪ್ರೌಢ ಶಾಲೆ ಕಗ್ಗೋಡದಲ್ಲಿ ನಡೆದ ವಿಜಯಪುರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವರಹಿಪ್ಪರಗಿಯ 9ನೇ ತರಗತಿಯ ಅಪೂರ್ವ ವಡ್ಡರ ಅವರು ಕವನ-ಪದ್ಯ ವಾಚನದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ವಿದ್ಯಾರ್ಥಿನಿಯ ಸಾಧನೆಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪುಂಡಲಿಕ ಮಾನವರ ಹಾಗೂ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.