ಭೀಮಾನದಿ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಸಿ: ಬಿ ಡಿ ಪಾಟೀಲ
Announce special package for Bhima River victims: BD Patil
ಇಂಡಿ: ಮತಕ್ಷೇತ್ರ ಸುಮಾರು14 ಗ್ರಾಮಗಳಾದ ಹಿಂಗಣಿ ಬರಗುಡಿ ಪಡನೂರ ಶಿರಗೂರ ಗುಬೇವಾಡ ಅಗರಖೇಡ ಮಣ್ಣೂರ ಬುಯ್ಯಾರ ನಾಗರಳ್ಳಿ ಖೇಡಗಿ ಹಾಗೂ ರೋಡಗಿ ಪ್ರತಿಬಾರಿ ಭೀಮಾನದಿ ಪ್ರವಾಹದಿಂದ ಬೆಲೆಬಾಳುವ ಬೆಳೆ ಜಾನುವಾರು, ಜೀವಹಾನಿ ಹಾಗೂ ಮನೆಗಳು ಹಾಳಾಗುವ ಸಮಸ್ಯೆಗಳು ಇಂಡಿ ತಾಲೂಕಿನ ರೈತರಿಗೆ ಹಾಗೂ ಅಧಿಕಾರಿಗಳಿಗೆ ಹೊಸದೇನಲ್ಲ. ಪ್ರತಿಬಾರಿ ಪ್ರವಾಹದಿಂದ ತತ್ತರಿಸಿರುವ ಭೀಮಾ ತೀರದ ರೈತರಿಗೆ ಒಣ ಆಶ್ವಾಸನೆಗಳು ಕೇಳಿ ಕೇಳಿ ಸುಸ್ತಾಗಿದ್ದಾರೆ.
ಆದರೆ ಈ ಬಾರಿ ಪ್ರವಾಹ ಅತೀಯಾದ ಹಾನಿಮಾಡಿದೆ. ಕಬ್ಬು, ತೋಗರಿ, ಹತ್ತಿ, ಮೆಕ್ಕೆಜೋಳ, ಸಜ್ಜೆ, ಶೆಂಗಾ ಸೇರಿದಂತೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಅತಿಯಾದ ಮಳೆ ಹಾಗೂ ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿದ್ದು ರೈತರ ಬದುಕು ಮೂರಾಬಟ್ಟೆ ಆಗಿದೆ. ತಕ್ಷಣ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೀಮಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಹಾಗೂ ತಾಲೂಕಿನ ಬೆಳೆ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಯನ್ನು ಸರ್ವೇ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಿಸಿದ್ದಾರೆ.
ಡಾ. ರಮೇಶ ರಾಠೋಡ, ಸಂತ್ರಸ್ತರೂಂದಿಗೆ ಮಾತನಾಡಿದರು. ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ದುಂಡು ಬಿರಾದಾರ, ಬುಳಾಳಿ ಕೆಳಗಿನಮನಿ, ಭೀಮ ಬಿರಾದಾರ, ಶಿವಪುತ್ರ ವಾಲಿಕಾರ, ಮರೇಪ್ಪ ಗಿರಣಿವಡ್ಡರ, ಮಲಕಾರಿ ಕೆಳಗಿಮನಿ, ಬೂತಾಳಿ ಅಂಕಲಗಿ, ಸೋಮನಿಂಗ ಗಿರಣಿವಡ್ಡರ, ಸಿದ್ದಲಿಂಗ ವಾಲಿಕಾರ, ದಸಗೀರಸಾಬ ಮಲ್ಲಾ, ನಿಯಾಝ್ ಅಗರಖೇಡ, ಶಿವಾಜಿ ಪೂಜಾರಿ, ಆಕಾಶ ಕ್ಷೇತ್ರಿ ಸೇರಿದಂತೆ ನೂರಾರು ಸಂತ್ರಸ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 