ಭೀಮಾನದಿ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಸಿ: ಬಿ ಡಿ ಪಾಟೀಲ
Announce special package for Bhima River victims: BD Patil
ಇಂಡಿ: ಮತಕ್ಷೇತ್ರ ಸುಮಾರು14 ಗ್ರಾಮಗಳಾದ ಹಿಂಗಣಿ ಬರಗುಡಿ ಪಡನೂರ ಶಿರಗೂರ ಗುಬೇವಾಡ ಅಗರಖೇಡ ಮಣ್ಣೂರ ಬುಯ್ಯಾರ ನಾಗರಳ್ಳಿ ಖೇಡಗಿ ಹಾಗೂ ರೋಡಗಿ ಪ್ರತಿಬಾರಿ ಭೀಮಾನದಿ ಪ್ರವಾಹದಿಂದ ಬೆಲೆಬಾಳುವ ಬೆಳೆ ಜಾನುವಾರು, ಜೀವಹಾನಿ ಹಾಗೂ ಮನೆಗಳು ಹಾಳಾಗುವ ಸಮಸ್ಯೆಗಳು ಇಂಡಿ ತಾಲೂಕಿನ ರೈತರಿಗೆ ಹಾಗೂ ಅಧಿಕಾರಿಗಳಿಗೆ ಹೊಸದೇನಲ್ಲ. ಪ್ರತಿಬಾರಿ ಪ್ರವಾಹದಿಂದ ತತ್ತರಿಸಿರುವ ಭೀಮಾ ತೀರದ ರೈತರಿಗೆ ಒಣ ಆಶ್ವಾಸನೆಗಳು ಕೇಳಿ ಕೇಳಿ ಸುಸ್ತಾಗಿದ್ದಾರೆ.
ಆದರೆ ಈ ಬಾರಿ ಪ್ರವಾಹ ಅತೀಯಾದ ಹಾನಿಮಾಡಿದೆ. ಕಬ್ಬು, ತೋಗರಿ, ಹತ್ತಿ, ಮೆಕ್ಕೆಜೋಳ, ಸಜ್ಜೆ, ಶೆಂಗಾ ಸೇರಿದಂತೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಅತಿಯಾದ ಮಳೆ ಹಾಗೂ ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿದ್ದು ರೈತರ ಬದುಕು ಮೂರಾಬಟ್ಟೆ ಆಗಿದೆ. ತಕ್ಷಣ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭೀಮಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಹಾಗೂ ತಾಲೂಕಿನ ಬೆಳೆ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಯನ್ನು ಸರ್ವೇ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲರು ಆಗ್ರಹಿಸಿದ್ದಾರೆ.
ಡಾ. ರಮೇಶ ರಾಠೋಡ, ಸಂತ್ರಸ್ತರೂಂದಿಗೆ ಮಾತನಾಡಿದರು. ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ದುಂಡು ಬಿರಾದಾರ, ಬುಳಾಳಿ ಕೆಳಗಿನಮನಿ, ಭೀಮ ಬಿರಾದಾರ, ಶಿವಪುತ್ರ ವಾಲಿಕಾರ, ಮರೇಪ್ಪ ಗಿರಣಿವಡ್ಡರ, ಮಲಕಾರಿ ಕೆಳಗಿಮನಿ, ಬೂತಾಳಿ ಅಂಕಲಗಿ, ಸೋಮನಿಂಗ ಗಿರಣಿವಡ್ಡರ, ಸಿದ್ದಲಿಂಗ ವಾಲಿಕಾರ, ದಸಗೀರಸಾಬ ಮಲ್ಲಾ, ನಿಯಾಝ್ ಅಗರಖೇಡ, ಶಿವಾಜಿ ಪೂಜಾರಿ, ಆಕಾಶ ಕ್ಷೇತ್ರಿ ಸೇರಿದಂತೆ ನೂರಾರು ಸಂತ್ರಸ್ತರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 