ಅಂಗನವಾಡಿಗಳು ಸ್ಥಳೀಯ ಮಕ್ಕಳ ಭವಿಷ್ಯವನ್ನು ರೂಪಿಸುತ್ತವೆ: ಬೇಮೂಲ್ ನಿರ್ದೇಶಕ ಶಂಕರ ಇಟ್ನಾಳ

ಅಂಗನವಾಡಿಗಳು ಸ್ಥಳೀಯ ಮಕ್ಕಳ ಭವಿಷ್ಯವನ್ನು ರೂಪಿಸುತ್ತವೆ: ಬೇಮೂಲ್ ನಿರ್ದೇಶಕ ಶಂಕರ ಇಟ್ನಾಳ Anganwadis shape the future of local children: Bemool Director Shankar Itnal

ಯರಗಟ್ಟಿ 28: ಸಮೀಪದ ಮೆಳ್ಳಿಕೇರಿ ತೋಟದ ಅಂಗನವಾಡಿ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನರೇಗಾ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷ ರೂಪಾಯಿ ವೆಚ್ಚದಡಿಯಲ್ಲಿ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಬೇಮೂಲ್ ನಿರ್ದೇಶಕ ಶಂಕರ ಇಟ್ನಾಳ " ನೂತನ ಅಂಗನವಾಡಿ ಕಟ್ಟಡದಿಂದ ಗಂಡು ಮಕ್ಕಳ ಮತ್ತು ಹೆಣ್ಣುಮಕ್ಕಳ ಆರೈಕೆ, ಪೋಷಣಾ ಸೇವೆಗಳು, ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಪರಿಪಾಲನೆ ಸುಗಮವಾಗಲಿದೆ. ಇದು ಸ್ಥಳೀಯ ಮಕ್ಕಳ ಭವಿಷ್ಯವನ್ನು ಮತ್ತಷ್ಟು ಉತ್ತಮಗೊಳಿಸಲು ನೆರವಾಗಲಿದೆ.ಮಕ್ಕಳ ಕಲಿಕೆಗೆ ಪೂರಕ ಶಿಕ್ಷಣ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಸವದತ್ತಿ ಸಿಡಿಪಿಓ ಅಮೃತ ಸಾಣಿಕೊಪ್ಪ,ಇಂಜಿನಿಯರ್ ಮಂಜುನಾಥ ಅಗೀಸಿಮನಿ,ಮೇಲ್ವಿಚಾರಕಿ ಮಾಯವ್ವ ಮುಗಳಿಹಾಳ, ಗ್ರಾ. ಪ. ಸದಸ್ಯ ಶಿವಪ್ಪ ಇಟ್ನಾಳ, ಗ್ಯಾ. ಯೋ. ಅಧ್ಯಕ್ಷ ಗೋಪಾಲ ದಳವಾಯಿ, ವಿಠ್ಠಲ ತೋರಣಗಟ್ಟಿ, ಯಲ್ಲಪ್ಪ ಭಾವಿಕಟ್ಟಿ, ಮಣಿಕಂಠ ಬಡಿಗೇರ, ಲಕ್ಕಪ್ಪ ಬ್ಯಾಕೋಡ, ಲಕ್ಕಪ್ಪ ಕೊರಕೊಪ್ಪ, ಸ್ಥಳೀಯ ಮುಖಂಡರುಗಳು, ಅಂಗನವಾಡಿ ಕಾರ್ಯಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.