ಘಟಪ್ರಭಾ: ಸಂಭ್ರಮದ ಅಂಭಾ ಭವಾನಿ ಜಾತ್ರೆ
ಲೋಕದರ್ಶನ ವರದಿ
ಘಟಪ್ರಭಾ 30: ಸ್ಥಳೀಯ ಗೊಂದಳಿ ಗಲ್ಲಿಯಲ್ಲಿರುವ ಅಂಭಾ ಭವಾನಿ ಜಾತ್ರೆಯು ಮಂಗಳವಾರದಂದು ಅತೀ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ಅಂಭಾ ಭವಾನಿಗೆ ರುದ್ರಾಭಿಷೇಕ, ಮಹಾ ಪೂಜೆ ಜರುಗಿತು. ನಂತರ ಶ್ರೀ ಅಂಭಾ ಭವಾನಿಯ ಭಾವ ಚಿತ್ರದ ಭವ್ಯ ಮೇರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ನಂತರ ಮಹಾಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ಮರಾಠಾ ಗೊಂದಳಿ ಸಮಾಜದ ಹಿರಿಯರಾದ, ಬಾಳುಮಹಾರಾಜ ಬೋಸಲೆ, ಯಲಪ್ಪ ಗುರುವ, ಶಿವಾಜಿ ಗೊಂದಳಿ, ಮಾಣಿಕ ಬೀಸೆ, ಶಿವಾಜಿ ಬೋಸಲೆ, ಸಿದ್ದೇಶ್ವರ ಬೋಸಲೆ, ಯಮನೂರ ವಾಕೋಡೆ, ರಾಜು ಗೊಂದಳಿ, ಸುರೇಶ ಗುರುವ, ಸೇರಿದಂತೆ ಅನೇಕ ಗೊಂದಳಿ ಸಮಾಜದ ಬಾಂಧವರು ಇದ್ದರು. ಯುವಕರು ಅತೀ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಜೈಶಿವಾಜಿ, ಜೈ ಭವಾನಿ ಎಂಬ ಜೈಕಾರ ಕೂಗುತ್ತಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 