ಧರಣಿ ಸತ್ಯಾಗ್ರಹಕ್ಕೆ ಅಂಬೇಡ್ಕರ್ ಸೇನೆ ಬೆಂಬಲ

ಧರಣಿ ಸತ್ಯಾಗ್ರಹಕ್ಕೆ ಅಂಬೇಡ್ಕರ್ ಸೇನೆ ಬೆಂಬಲ  Ambedkar Sena support for dharani satyagraha

ತಾಳಿಕೋಟಿ 24: ಕಲಿಕೇರಿಯಿಂದ ಬಿಂಜಲಬಾವಿ ಗ್ರಾಮದ ಮಾರ್ಗವಾಗಿ ಕೆಸರಟ್ಟಿಯವರೆಗೆ ರಸ್ತೆ ಡಾಂಬರೀಕರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಷ್ಟ್ರೀಯ ರೈತ ಸಂಘದ ಅಶೋಕಗೌಡ ನೇತೃತ್ವದಲ್ಲಿ ತಾಲೂಕ ಘಟಕದ ಪದಾಧಿಕಾರಿಗಳು ಜುಲೈ 20 ರಿಂದ ಬಿಂಜಲಭಾವಿ ಗ್ರಾಮದ ಹಳ್ಳದ ಹತ್ತಿರ ಆರಂಭಿಸಿದ ಧರಣಿಯಲ್ಲಿ ಅಂಬೇಡ್ಕರ್ ಸೇನೆ ತಾಳಿಕೋಟಿ ತಾಲೂಕ ಘಟಕದ ಪದಾಧಿಕಾರಿಗಳು ಗುರುವಾರ ಭಾಗವಹಿಸಿ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ ಹಾಗೂ ತಾಲೂಕಾಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ ಸುಮಾರು ವರ್ಷಗಳಿಂದ ರಸ್ತೆ ಸುಧಾರಣೆಯಾಗದೆ ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಇಲ್ಲಿಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಆದಷ್ಟು ಬೇಗ ಇದರ ಕುರಿತು ಕ್ರಮ ವಹಿಸಬೇಕು ಇದರ ಜೊತೆಗೆ ಈ ಭಾಗದ ರೈತರ ಹಲವಾರು ನ್ಯಾಯ ಯುತವಾದ ಬೇಡಿಕೆಗಳಿವೆ ಅವುಗಳನ್ನು ಆದಷ್ಟು ಬೇಗ ಈಡೇರಿಸಬೇಕು ಇಲ್ಲದೆ ಹೋದಲ್ಲಿ ಈ ಹೋರಾಟ ಇನ್ನಷ್ಟು ಉಗ್ರವಾಗಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹಣಮಂತ ಈ.ವಡ್ಡರ, ಜಿಲ್ಲಾ ಉಪಾಧ್ಯಕ್ಷ ಮ?ಬೂಬಬಾಷಾ ಮನಗೂಳಿ, ತಾಳಿಕೋಟಿ ತಾಲೂಕಾ  ಉಪಾಧ್ಯಕ್ಷ ಶರಣು ಕವದಿ, ಮತ್ತು ತಾಳಿಕೋಟಿ ಅಂಬೇಡ್ಕರ್ ಸೇನೆ ಯುವ ಮೋರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ, ಹಿರಿಯ ಮುಖಂಡ ಮಲ್ಲಪ್ಪ ಶಿರೋಳ, ಅಂಬೇಡ್ಕರ್ ಸೇನೆ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಕಟ್ಟಿಮನಿ,ದಲಿತ ಮುಖಂಡ ರಮೇಶ ಮಾದರ ಹಡಗಿನಾಳ,ಯುವ ಮುಖಂಡ ಬಾಬುಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.