ಸಚಿವ ತಿಮ್ಮಾಪೂರ ಮೇಲೆ ಆರೋಪ ಸತ್ಯಕ್ಕೆ ದೂರ: ಡಾ. ಎ.ಆರ್.ಬೆಳಗಲಿ
Allegations against Minister Thimmapur are far from the truth: Dr. A.R. Belagali
ಲೋಕದರ್ಶನ ವರದಿ
ಸಚಿವ ತಿಮ್ಮಾಪೂರ ಮೇಲೆ ಆರೋಪ ಸತ್ಯಕ್ಕೆ ದೂರ: ಡಾ. ಎ.ಆರ್.ಬೆಳಗಲಿ
ಮಹಾಲಿಂಗಪುರ 05: ಕಳೆದ ಕೆಲವು ದಿನಗಳಿಂದ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಅಬಕಾರಿ ಸಚಿವರಾದ ಅರ್.ಬಿ ತಿಮ್ಮಾಪೂರ ಮದ್ಯದಂಗಡಿ ಪರವಾಣಿಗೆ ನೀಡಲು ಹಣ ಕೇಳಿದ್ದಾರೆ ಎಂಬ ಆರೋಪ ಮಾಡುತ್ತಿರುವುದು ಖಂಡನೀಯ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಜಿಲ್ಲಾ ಕಾಂಗ್ರೆಸ ಉಪಾಧ್ಯಕ್ಷ ಡಾ. ಎ.ಆರ್.ಬೆಳಗಲಿ ಹೇಳಿದರು.
ಸ್ಥಳೀಯ ಡಾ. ಎ.ಆರ್.ಬೆಳಗಲಿ ಅವರ ಕಚೇರಿಯಲ್ಲಿ ಮಾತನಾಡಿದ ಅವರು ಈಗ ಅಮಾನತ್ತಾಗಿರುವ ಅಧಿಕಾರಿ ಜೋತೆಗೆ ಸಚಿವ ಆರ್.ಬಿ ತಿಮ್ಮಾಪೂರ ಆಗಲಿ ಅಥವಾ ಅವರಿಗೆ ಸಂಭಂದ ಪಟ್ಟ ಯಾರೋಬ್ಬರು ಮಾತನಾಡಿರುವುದಿಲ್ಲ, ಇದು ಸಚಿವರ ತೇಜೋವಧೆಗಾಗಿ ನಡೆಯುತ್ತಿರುವ ವ್ಯೆರ್ಥ ಪ್ರಯತ್ನವಾಗಿದೆ. ಇದೇ ವಿಷಯದ ಕುರಿತು ವಿರೋಧ ಪಕ್ಷದ ಕೆಲ ಮುಖಂಡರು ಸಚಿವರ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ವಿರೋಧ ಪಕ್ಷದ ಮುಖಂಡರಾದ ಆರ್.ಅಶೋಕ ಮತ್ತು ಚಲವಾದಿ ನಾರಾಯಣ ಸ್ವಾಮಿಯಾಗಿರಲಿ ಅವರ ಹತ್ತಿರ ಏನಾದರೂ ದಾಖಲೆಗಳಿದ್ದರೆ ಬಿಡುಗೋಡೆಗೋಳಿಸಿ, ಇಲ್ಲವೆ ಸತ್ಯಾಂತಕ್ಕಾಗಿ ಅಮಾನತ್ತುಗೊಂಡ ಅಧಿಕಾರಿಯನ್ನು ಬೇಕಾದರೆ ಮರು ಪರಿಕ್ಷೆಗೆ ಒಳಪಡಿಸಲಿ, ಅದು ಬಿಟ್ಟು ಸಚಿವರ ಮೇಲೆ ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು, ಇಲ್ಲವಾದಲ್ಲಿ ವಿರೋಧ ಪಕ್ಷದ ನಾಯಕರ ವಿರುದ್ದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ ಕಾರ್ಯಕರ್ತರಿಂದ ಬೃಹತ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಬಾಗಲಕೋಟ ಜಿಲ್ಲಾ ಹಿರಿಯ ರಾಜಕಾರಣಿ ಸರಳ ಸಜ್ಜನಿಕೆಯ ಸಚಿವರಾದ ಅರ್.ಬಿ ತಿಮ್ಮಾಪೂರ ಅವರ ಮೇಲೆ ಸುಳ್ಳು ಆರೋಪದ ತೇಜೋವೇದೆ ಮಾಡುವುದನ್ನು ವಿರೋಧ ಪಕ್ಷದ ನಾಯಕರು ನಿಲ್ಲಿಸಬೇಕೆಂದು ಬಾಗಲಕೋಟ ಜಿಲ್ಲಾ ಕಾಂಗ್ರೆಸ ಸೇವಾದಳ ಯುವ ಅಧ್ಯಕ್ಷ ಪ್ರಕಾಶ ಉತ್ತೂರ ಘಟಕದ ವತಿಯಿಂದ ಆಗ್ರಹಿಸುತ್ತೇವೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 