ಆಕಾಶವಾಣಿ ವಾಕಥಾನ್ ಚಾಲನೆ
All India Radio Walkathon launched
ಲೋಕದರ್ಶನ ವರದಿ
ಕಾರವಾರ ಮೇ.15: ಆಕಾಶವಾಣಿ 90ರ ವರ್ಷಾಚರಣೆಯ ಅಂಗವಾಗಿ ಕಾರವಾರ ಆಕಾಶವಾಣಿ ಕೇಂದ್ರವು ರವೀಂದ್ರ ಠಾಗೋರ್ ಕಡಲ ತೀರದಲ್ಲಿ ಹಮ್ಮಿಕೊಂಡಿದ್ದ ಸಮೂಹ ನಡಿಗೆಗೆ ಕಾರವಾರದ ಅವರ್ ಸೋಷಿಯಲ್ ಗುಡ್ ಸಂಸ್ಥೆಯ ಪವನ್ ಸಾವಂತ್, ಬ್ರಹ್ಮಕುಮಾರಿ ಈಶ್ವರೀಯವಿಶ್ವ ವಿದ್ಯಾಲಯದ ಜಿಲ್ಲಾ ಸಂಯೋಜಕಿ ಬಿ.ಕೆ.ಕವಿತಾ ಹಾಗೂ ಆಕಾಶವಾಣಿ ಕಾರವಾರ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಟಿ.ಶ್ಯಾಮ ಪ್ರಸಾದ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ನಡಿಗೆಯು ಠಾಗೋರ್ ಕಡಲ ತೀರದಿಂದ ಆರಂಭಗೊಂಡು ಹೆಂಜಾ ನಾಯ್ಕ ವೃತ್ತ, ಕೋಡಿಭಾಗ್ ರಸ್ತೆಯ ಮೂಲಕ ಸಾಗಿ ಬಂದ ಮೆರವಣಿಗೆ ಆಕಾಶವಾಣಿ ಕಾರವಾರ ಕಚೇರಿ ಆವರಣದಲ್ಲಿ ಸಮಾಪನಗೊಂಡಿತು. ದಾರಿಯುದ್ದಕ್ಕೂ ಆಕಾಶವಾಣಿ-ಮಧುರವಾಣಿ,ಉಲಿ-ಬಾನುಲಿ, ಆಕಾಶವಾಣಿ-ನಮ್ಮ ವಾಣಿ ಮೊದಲಾದ ಉದ್ಘೋಷಗಳು ಮೊಳಗಿದವು. ಕಾರ್ಯಕಮದಲ್ಲಿ ಕಾರವಾರದ ಆಕಾಶವಾಣಿ ಸಿಬ್ಬಂದಿ, ಕಾರ್ಯಕ್ರಮ ಸಹಾಯಕರು, ರೋಟರಿ ಕಾರವಾರ,ಅವರ್ ಸೋಷಿಯಲ್ ಗುಡ್ ಸಂಸ್ಥೆ ಹಾಗೂ ಇನ್ನಿತರರು ಸೇರಿದಂತೆ 100ಕ್ಕೂ ಹೆಚ್ಚು ಜನರು ನಡಿಗೆಯಲ್ಲಿ ಭಾಗವಹಿಸಿದರು.ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 