ಬೂದಿಹಾಳ್ ಗ್ರಾಮದಲಿ ಅಕ್ಷರ್ ಫೌಂಡೇಶನ್ಟಿ ಬೇಸಿಗೆ ಶಿಬಿರ
Akshar Foundation Summer Camp in Budihal Village
ಬೈಲಹೊಂಗಲ್ 26 : ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ಅಕ್ಷರ್ ಫೌಂಡೇಶನ್, ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದ ವತಿಯಿಂದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಚಟುವಟಿಕೆ ಆಧಾರಿತ ಅಭ್ಯಾಸಗಳನ್ನು ನೀಡಲಾಯಿತು. ಶಿಬಿರದಲ್ಲಿ ಒಟ್ಟು 42 ವಿದ್ಯಾರ್ಥಿಗಳು ಭಾಗಿಯಾಗಿದ್ದು ಅಕ್ಷರ್ ಫೌಂಡೇಶನ್ ದ ಕ್ಲಸ್ಟರ್ ಸಂಯೋಜಕರಾದ ಗಿರಿ ಗೌಡ ಪಾಟೀಲ್ ಇವರು ಮಕ್ಕಳಿಗೆ ಚಟುವಟಿಕೆ ಆಧಾರಿತ ಅಭ್ಯಾಸಗಳಲ್ಲಿ ಗ್ರಾಮದ ನಕ್ಷೆ, ಒಟ್ಟು ಮನೆಗಳಸಂಖ್ಯೆ, ಒಟ್ಟು ಜನಸಂಖ್ಯೆ, ಗ್ರಾಮದಲ್ಲಿರುವ ಗಿಡಮರಗಳ ಹೆಸರು, ಬೆಳೆಗಳ ಹೆಸರು, ಕನ್ನಡ ಇಂಗ್ಲಿಷ್ ಪದಗಳನ್ನು ಬರೆಯುವುದು ಹಾಗೂ ಚಿತ್ರ ಬಿಡಿಸುವುದು ಹೀಗೆ ಅನೇಕ ಚಟುವಟಿಕೆ ಆಧಾರಿತ ಅಭ್ಯಾಸಗಳನ್ನು ಮಾಡಿಸುವುದಾಗಿ ತಿಳಿಸಿದರು.
ಈ ಅಭ್ಯಾಸಗಳಿಂದ ತಮ್ಮ ಗ್ರಾಮದ ಹಾಗೂ ಸುತ್ತಮುತ್ತಲಿ ಪರಿಸರದ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಜ್ಞಾನವನ್ನು ತಾವೇ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಕನ್ನಡ ಓದಲು ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಾಡಿಸಲಾಯಿತು. ಈ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶಿವಾನಂದ್ ಚಚಡಿ ಹಾಗೂ ಸದಸ್ಯರಾದ ಬಾಬು ಕುಲಕರ್ಣಿ ಪಾಲಕರಾದ ಪರಶುರಾಮ್ ಅಳಗುಂಡಿ ಸ್ವಯಂಸೇವಕರಾದ ಮಾದರ್ ಸರ ಹಾಗೂ ಇನ್ನಿತರರು ಭಾಗವಹಿಸಿದ್ದರು
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 