ವಿಶ್ವದಾಖಲೆ ನಿರ್ಮಿಸಿರುವ ಐರಾ ದೀಪಕ ಕತ್ತಿಗೆ ಸನ್ಮಾನ
ಹುಬ್ಬಳ್ಳಿ 11: ವಿಜಯಪರದ 9 ತಿಂಗಳ ಬಾಲೆ 422 ವಸ್ತುಗಳನ್ನು ಗುರುತಿಸುವ ಮೂಲಕ ನೊಬೆಲ್ ವಿಶ್ವದಾಖಲೆ ನಿರ್ಮಿಸಿರುವ ಐರಾ ದೀಪಕ ಕತ್ತಿ ಅವರನ್ನು ಬಸವಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಹೊರಕೇರಿ ಹೃದಯ ತುಂಬಿ ಅಭಿನಂದನೆಗಳನ್ನು ಸಲ್ಲಿಸಿದರು. 9 ತಿಂಗಳ ಮಗು ಐರಾ ಅವರಿಗೆ ಮುಂದಿನ ಜೀವನ ಉತ್ತಮ ಹಾಗೂ ಸಮೃದ್ಧಿಯಿಂದ ಕೂಡಿರಲಿ, ಹೀಗೆ ಸಾಧನೆ ಮುಂದುವರೆಯಲಿ, ಯಶಸ್ಸು ಸದಾ ಸಿಗಲಿ ಎಂದು ಶುಭ ಕೋರಿದರು.
ಹುಬ್ಬಳ್ಳಿಯ ಉದ್ಯಮಿ, ಐರಾ ಅಜ್ಜ ಲೋಕೇಶ ಕೊರವಿ, ಅಜ್ಜಿ ಪ್ರೇಮಾ ಕೊರವಿ, ತಾಯಿ ಅನುಷಾ ದೀಪಕ ಕತ್ತಿ, ಮಾವ- ರೈಫಲ್ ತಯಾರಿಕ ಫಾಕ್ಟರಿ ಮಾಲಿಕ, ಇಂಜಿನಿಯರ್ ಅಂಕುಶ ಕೊರವಿ, ಶ್ರೀ ಸಿದ್ಧಾರೂಢಮಠ ಟ್ರಸ್ಟ ಕಮೀಟಿಯ ಕಾರ್ಯಾಧ್ಯಕ್ಷರು, ಖ್ಯಾತ ಲೆಕ್ಕಪರಿಶೋಧಕರಾದ ಸಿಎ ಚೆನ್ನವೀರ ಮುಂಗರವಾಡಿ, ಅಂಬಿಗರ ಚೌಡಯ್ಯ ಸಮಾಜದ ಮುಖಂಡ ಅಶೋಕಕುಮಾರ ಬೆಸ್ತ, ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಕಾರ್ಯದರ್ಶಿ ಡಾ. ಪ್ರಕಾಶ ಮುನ್ನೋಳಿ, ಕಾರ್ಯಾಧ್ಯಕ್ಷ ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಬಸವ ಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿಯ ಶಾಲೆಯ ಅಧ್ಯಕ್ಷ ಎಸ್.ವಿ.ಕೊಟಗಿ, ಬಸವರಾಜ ಲಿಂಗಶೆಟ್ಟರ, ಕೆ.ಎಸ್.ಇನಾಮತಿ, ಎಂ.ಬಿ.ಕಟ್ಟಿ, ಪ್ರಭು ಅಂಗಡಿ, ಶಿವಾನಂದ ಬೆನ್ನಾಳೆ, ಮುಂತಾದವರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 