ಹದಿಹರೆಯವು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಪರಿವರ್ತನೆಯ ಹಂತ: ತಾವರಗೇರಿ
Adolescence is a transitional stage between childhood and adulthood: Thavarageri
ಧಾರವಾಡ 24: ಹದಿಹರೆಯವು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಪರಿವರ್ತನೆಯ ಹಂತವಾಗಿದ್ದು, ವಿವಿಧ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಮಕ್ಕಳು ಅನುಭವಿಸುತ್ತಾರೆ ಎಂದು ಹಿರಿಯ ತಜ್ಞೆ ಡಾ.ಶರಯೂ ತಾವರಗೇರಿ ಹೇಳಿದರು.
ಇಲ್ಲಿನ ಧಾರವಾಡ ಲಯನ್ಸ್ ಸಂಸ್ಥೆಯು ಸರಕಾರಿ ಮಾದರಿ ಪ್ರಾಥಮಿಕ ಪ್ರಾಯೋಗಿಕ ಶಾಲೆಯಲ್ಲಿ ಏರಿ್ಡಸಿದ ಹದಿಹರೆಯದ ಬಾಲಕಿಯರ ತಿಳುವಳಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಹದಿಹರೆಯದ ಹುಡುಗಿಯರ ದೇಹದಲ್ಲಿ ಉಂಟಾಗುವ ಋತುಚಕ್ರ, ಹಾರ್ಮೋನ್ ಬದಲಾವಣೆಗಳು ಮತ್ತು ಇತರ ಶಾರೀರಿಕ ಬೆಳವಣಿಗೆಯ ಪ್ರಕ್ರಿಯೆ ಬಗ್ಗೆ ಸ್ವಾರಸ್ಯಕರವಾಗಿ ಸೂಕ್ತ ಮಾಹಿತಿ ನೀಡಿದರು.
ಹೆಣ್ಣು ಮಕ್ಕಳು ಉತ್ತಮ ಪೌಷ್ಟಿಕಾಂಶ, ಸ್ವಚ್ಚತೆ ಮತ್ತು ನಿಯಮಿತ ವ್ಯಾಯಾಮದಂತಹ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಎಮ್. ಆರ್. ಹಿರೇಮಠ ಮಾತನಾಡಿ , ಧಾರವಾಡ ಲಯನ್ಸ್ ಸಂಸ್ಥೆಯವರ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 85 ಬಾಲಕಿಯರಿಗೆ ಸ್ಯಾನಟರಿ ನ್ಯಾಪಕಿನ್ಸ್ ಮತ್ತು ನೋಟಬುಕ್ಸ್ ಗಳನ್ನು ವಿತರಿಸಲಾಯಿತು.
ಕವಿತಾ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಶ್ರೀಕಾಂತ ದೇವಗಿರಿ, ಡಾ.ಕೆ.ವಿ.ಅಚ್ಯುತ, ಅಮೃತಾ ಜೋಶಿ, ರಶ್ಮೀ ಭಾರದ್ವಾಜ್,ಸಂಧ್ಯಾ ಅರಬಟ್ಟಿ,ಶಶಿಕಲಾ ನಾಯ್ಕರ ಮತ್ತು ಶಾಲೆಯ ಸಿಬ್ಬಂದಿ ಹಾಜರಿದ್ದರು. ಕವಿತಾ ಅಂಗಡಿ ಸ್ವಾಗತಿಸಿದರು. ಶೈಲಾ ಕರಗುದರಿ ಪರಿಚಯಿಸಿದರು. ಕಾರ್ಯದರ್ಶಿ ಪ್ರೊ.ಸುರೇಶ ಗುದಗನವರ ನಿರೂಪಿಸಿದರು. ಡಾ.ರಾಜಶ್ರೀ ಗುದಗನವರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 