ಮುರಕೀಭಾವಿ ಪಿಕೆಪಿಎಸ್ ಅಧ್ಯಕ್ಷರಾಗಿ ಅಡಿವಪ್ಪ ಕುಂದರನಾಡ, ಉಪಾಧ್ಯಕ್ಷರಾಗಿ ಈರನಗೌಡ ಪಾಟೀಲ ಅವಿರೋಧ ಆಯ್ಕೆ

ಮುರಕೀಭಾವಿ ಪಿಕೆಪಿಎಸ್ ಅಧ್ಯಕ್ಷರಾಗಿ ಅಡಿವಪ್ಪ ಕುಂದರನಾಡ, ಉಪಾಧ್ಯಕ್ಷರಾಗಿ ಈರನಗೌಡ ಪಾಟೀಲ ಅವಿರೋಧ ಆಯ್ಕೆ  Adivappa Kundaranada and Eeranagowda Patil unanimously elected as President and Vice-President of Mu


ಮದನಭಾವಿ 18 : ಗ್ರಾಮದ ಮುರಕೀಭಾವಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಡಿವಪ್ಪ ವೀರ​‍್ಪ ಕುಂದರನಾಡ ಹಾಗೂ ಉಪಾಧ್ಯಕ್ಷರಾಗಿ ಈರನಗೌಡ ಬಸವಂತರಾಯ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾರ್ಗದರ್ಶನದಲ್ಲಿ ಆಯ್ಕೆ ನಡೆಯಿತು. ನೂತನ ಪದಾಧಿಕಾರಿಗಳು ಮೂರು ಗ್ರಾಮಗಳ ರೈತರಿಗೆ ಬೀಜ, ಗೊಬ್ಬರ, ಕೃಷಿ ಸಲಕರಣೆ ಹಾಗೂ ಸಮಯಕ್ಕೆ ಸರಿಯಾಗಿ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮಹಾಂತೇಶ ದೊಡ್ಡಗೌಡರ ಸಲಹೆ ನೀಡಿದರು. ಸಂಘ ಮತ್ತು ರೈತರ ಅಭಿವೃದ್ಧಿಗೆ ಹೊಸ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ತಿಳಿಸಿದರು.