ರೈತರಿಗೆ ಅನ್ಯಾಯ ಆಗದಂತೆ ಕ್ರಮ: ರೈತರ ಹೋರಾಟಕ್ಕೆ ಶಾಸಕ ವೈದ್ಯ ಪ್ರತಿಕ್ರಿಯೆ

ರೈತರಿಗೆ ಅನ್ಯಾಯ ಆಗದಂತೆ ಕ್ರಮ: ರೈತರ ಹೋರಾಟಕ್ಕೆ ಶಾಸಕ ವೈದ್ಯ ಪ್ರತಿಕ್ರಿಯೆ Action to prevent injustice to farmers: MLA Vaidya's response to farmers' struggle


ಯರಗಟ್ಟಿ, 04 : ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರೈತ ಪ್ರತಿಭಟನೆ ಸ್ಥಳಕ್ಕೆ ಶಾಸಕ ವಿಶ್ವಾಸ ವೈದ್ಯ ಭೇಟೀನೀಡಿ ಮನವಿ ಸ್ವೀಕರಿಸಿದರು.ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು ನಾವು ಕೂಡ ರೈತರು, ಕಾರ್ಖಾನೆ ಮಾಲೀಕರಿಂದ ಯಾವುದೆಕಾರಣಕ್ಕೆ ರೈತರಿಗೂ ಅನ್ಯಾಯ ಆಗಬಾರದು, ಕಾರ್ಖಾನೆ ಮಾಲೀಕರಿಗೂ ಅನ್ಯಾಯ ಆಗಬಾರದು ಎಂದು ಶಾಸಕ ವಿಶ್ವಾಸ ವೈದ್ಯ ಪ್ರತಿಕ್ರಿಯಿಸಿದ್ದಾರೆ. ಕಬ್ಬು ಬೆಲೆ ಹೆಚ್ಚಳಕ್ಕೆ ರೈತರ ಪ್ರತಿಭಟನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ, ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ರೈತರ ಸಂಪರ್ಕದಲ್ಲಿದ್ದಾರೆ ಎಂದರು. 

ಕಾರ್ಖಾನೆ ಮಾಲೀಕರು, ರೈತರು ಸೇರಿ ಸಭೆ ಮಾಡುತ್ತೇವೆ. ದರದ ಬಗ್ಗೆ ಮಾತನಾಡಲು ಹೋದರೆ ಬೇರೆ ರೀತಿ ಆಗುತ್ತೆ. ರೈತರಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾ ಆಡಳಿತದಿಂದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಚರ್ಚೆ ಮಾಡಲು ಯತ್ನಿಸುತ್ತೆವೆ ಎಂದು ಹೇಳಿದರು. ಈ ವೇಳೆ ರೈತ ಮುಖಂಡರಾದ ಶಿವಲಿಂಗಪ್ಪ ನುಗ್ಗಾನಟ್ಟಿ, ಸೋಮು ರೈನಾಪೂರ, ಯಂಕಣ್ಣಾ ಹುರಕನ್ನವರ, ಲಕ್ಕಪ್ಪ ಬಿಜ್ಜನ್ನವರ, ಬೆಮುಲ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಪ್ರಕಾಶ ವಾಲಿ, ಲಕ್ಷ್ಮಣ ಗುಡಗನ್ನವರ, ಈರ​‍್ಪ ಕತ್ತಿ, ಭೀಮಪ್ಪ ತಳವಾರ ಸೇರಿದಂತೆ ಅನೇಕರು ರೈತ ಮುಖಂಡರು.