ಲಾರಿಗಳ ಮಧ್ಯೆ ಅಪಘಾತ: ಮೂವರು ಗಂಭೀರ ಗಾಯ

ಲಾರಿಗಳ ಮಧ್ಯೆ ಅಪಘಾತ: ಮೂವರು ಗಂಭೀರ ಗಾಯ Accident between trucks: Three seriously injured

ಮಹಾಲಿಂಗಪುರ 16: ಮಂಗಳವಾರ ಮುಂಜಾನೆ ಪಟ್ಟಣದ ಹೊರವಲಯ ಸೈದಾಪುರ - ಸಮೀರವಾಡಿ ರಸ್ತೆಯಲ್ಲಿ ಈಚರ್ ಮತ್ತು ಟಾಟಾ ಕಂಪೆನಿಯ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ. 

ಈ ಅಪಘಾತದಲ್ಲಿ ಲಾರಿ ಚಾಲಕರಿಬ್ಬರೂ ಮತ್ತು ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ರಭಸದ ಸಪ್ಪಳ ಕೇಳಿ ಆಸುಪಾಸಿನ ಜನ ಸ್ಥಳಕ್ಕೆ ಆಗಮಿಸಿ, ಲಾರಿಯಲ್ಲಿ ಸಿಲುಕಿದ ಚಾಲಕರನ್ನು ರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ಅಪಘಾತದ ವಿಷಯ ತಿಳಿದ ತಕ್ಷಣ ಮಹಾಲಿಂಗಪುರ ಠಾಣೆಯ ಪಿಎಸ್‌ಐ ಕಿರಣ ಸತ್ತಿಗೇರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡರು. ಹೆಚ್ಚಿನ ಮಾಹಿತಿ ಲಭ್ಯವಿಲ್ಲ.