ತುಳಜಾ ಭವಾನಿ ದೇವಿಗೆ ಅಭಿಷೇಕ, ಪೂಜಾ ಮತ್ತು ಪ್ರಾರ್ಥನೆ ಯೋಧರಿಗೆ ಅಭಿನಂದನೆ
Abhishek, puja and prayers to Goddess Tulja Bhavani
ರಾಣೇಬೆನ್ನೂರು 11 : ನಮ್ಮ ದೇಶದ ಯೋಧರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದನ್ನು ನಗರದ ಸ್ವಕುಳಸಾಳಿ ಸಮಾಜ ಅತ್ಯಂತ ಗೌರವದಿಂದ ಅಭಿನಂದಿಸುತ್ತದೆ.
ದೇಶದಲ್ಲಿ ಶಾಂತಿ ಕದಡುವ ಉಗ್ರರ ತರಬೇತಿ ಕೇಂದ್ರಗಳ ನಾಶ ಮಾಡಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮತ್ತು ಮುಂದೆ ನೆಡೆಯುವ ಎಲ್ಲಾ ಸೈನಿಕ ಕಾರ್ಯಚರಣೆಗಳು ಸಂಪೂರ್ಣವಾಗಿ ಯಶಸ್ವಿಯಾಗಲಿ ಎಂದು ದೇವಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಇದಲ್ಲದೆ ನಮ್ಮ ಸೈನಿಕರಿಗೆ ಹೆಚ್ಚಿನ ಶಕ್ತಿ, ಸಾಮರ್ಥ್ಯ ಭಗವಂತ ದಯಪಾಲಿಸಲು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ದೇಶದ ಬಾರ್ಡ್ ರನಲ್ಲಿ ಇರುವ ನಾಗರಿಕರ ಹಾಗೂ ಯೋಧರ ಸುರಕ್ಷತೆಗಾಗಿ ತುಳುಜಭವಾನಿ ಮಾತೆಯ ಆಶೀರ್ವಾದಕ್ಕಾಗಿ ಸಮಾಜದ ಎಲ್ಲರೂ ಬೇಡಿಕೊಂಡರು.
ಸಮಾಜದ ಯೋಗೇಶ್ ದೊತ್ರೆ, ನೀಲಕಂಠಪ್ಪ ರೋಖಡೆ, ಕರಬಸಪ್ಪ ಏಕಬೋಟೆ, ದೇವೇಂದ್ರ ರೋಖಡೆ, ಪರುಶುರಾಮ ರೋಖಡೆ, ಶ್ರೀನಿವಾಸ ಪಾಣಿಭಾತೆ, ಧೀರೇಂದ್ರ ಏಕಬೋಟೆ ಹಾಗೂ ಮಹಿಳಾ ಮಂಡಳದ ಶ್ರೀಮತಿ ರಾಜೇಶ್ವರಿ ಏಕಬೋಟೆ, ಶಾಂತಲಕ್ಷ್ಮೀ ರೋಖಡೆ, ವಿನೋದಿನಿ ರೋಖಡೆ, ವೈಶಾಲಿ ಪಾಣಿಭಾತೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 