ಎಎಸ್‌ಐ ಮಹಾಂತಯ್ಯ ಮಠ ಹೃದಯಾಘಾತದಿಂದ ನಿಧನ

ಎಎಸ್‌ಐ ಮಹಾಂತಯ್ಯ ಮಠ ಹೃದಯಾಘಾತದಿಂದ ನಿಧನ ASI Mahanthayya Math passes away

ಮಹಾಲಿಂಗಪುರ 13: ಸ್ಥಳೀಯ ಪೊಲೀಸ್ ಠಾಣೆಯ ಎಎಸ್‌ಐ  ಮಹಾಂತಯ್ಯ ಮಹಾದೇವಯ್ಯ ಮಠ(52) ಮಂಗಳವಾರ ಕರ್ತವ್ಯ ವೇಳೆ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ. 

ಸಂತಾಪ: ಬಾಗಲಕೋಟೆಯ ಎಸ್ಪಿ ಸಿದ್ಧಾರ್ಥ ಗೋಯಲ್, ಕ್ರೈಂ ವಿಭಾಗದ ಮಹಾಂತೇಶ ಜಿದ್ದಿ, ಜಮಖಂಡಿಯ ಡಿಎಸ್ಪಿ ಜಮೀರ್ ರೋಷನ್, ಬನಹಟ್ಟಿಯ ಸಿಪಿಐ ಸಂಜೀವ ಬಳಗಾರ, ಮಹಾಲಿಂಗಪುರ ಠಾಣಾಧಿಕಾರಿಗಳಾದ ಕಿರಣ ಸತ್ತಿಗೇರಿ, ಮಧು ಎಲ್ ಸೇರಿದಂತೆ ನಗರ ಠಾಣೆಯ ಪೊಲೀಸ್ ಸಿಬ್ಬಂದಿಯವರು ಸಂತಾಪ ಸೂಚಿಸಿದ್ದಾರೆ.