ಪ್ಯಾನಲ್ ವಕೀಲರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ

ಹಾವೇರಿ: ಜೀವನ ಪ್ರತಿ ಹಂತ ಹೊಸ ವಿಷಯ ಹಾಗೂ ಅನುಭವ ನೀಡುತ್ತದೆ. ಕಲಿಕೆಯಲ್ಲಿ ಯಾವ ಮನುಷ್ಯರೂ ಪರಿಪೂರ್ಣರಲ್ಲ. ಕಲಿಕೆ ನಿರಂತರ ಕ್ರಿಯೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ರೇಣುಕಾದೇವಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕಿರ್ಣ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಭಾಂಗಣದಲ್ಲಿ ಸೋಮವಾರ ಕನರ್ಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಭಾಂಗಣದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಅಭಿಯೋಜನಾ ಇಲಾಖೆ ಆಶ್ರಯದಲ್ಲಿ ಜರುಗಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆ ಎಲ್ಲ ತಾಲೂಕು ಕಾನೂನು ಸೇವಾ ಸಮಿತಿಗಳಿಗೆ 2019ನೇ ಸಾಲಿಗೆ ಹೊಸದಾಗಿ ನೇಮಕಗೊಂಡ ಪೆನಲ್ ವಕೀಲರುಗಳಿಗೆ ಎರಡು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪ್ರತಿ ರಂಗದಲ್ಲೂ ಕಲಿಕೆ ಅತ್ಯಗತ್ಯವಾಗಿದೆ. ವಕೀಲರಾಗಿ ಸೇವೆಯಲ್ಲಿರುವವರಿಗೂ ಇಂತಹ ಶಿಬಿರಗಳು ಹೊಸ ಹೊಸ ವಿಷಯಗಳ ಕಲಿಕೆಗೆ ಅವಕಾಶ ಕಲ್ಪಿಸುತ್ತದೆ. 

   ನಮ್ಮ ಆಯ್ಕೆ ಕ್ಷೇತ್ರದಲ್ಲಿ ಪರಮ ಉತ್ಕೃಷ್ಟತೆ ಸಾಧಿಸಬೇಕು. ಎಲ್ಲರಿಗೂ ಸಾಮಥ್ರ್ಯವಿದೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ವಿಕಸನಗೊಳ್ಳಬೇಕು. ಪ್ಯಾನಲ್ ವಕೀಲರಿಗಾಗಿ ಆಯೋಜಿಸಿರುವ ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ವಕೀಲರಾದ ಜಿ.ಕೆ.ಕಮ್ಮಾರ ಅವರು ಮಾತನಾಡಿ,  ವಿದ್ಯೆ ದೊಡ್ಡದು, ಅನುಭವ ಅದಕ್ಕಿಂತ ದೊಡ್ಡದು. ವಿದ್ಯೆ ಬೇರೆ ಹಾಗೂ ಅನುಭವ ಬೇರೆ.  ಎಲ್ಲರೂ ಬುದ್ಧಿವಂತರೆ ಆದರೆ ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಎಲ್ಲರೂ  ಹೊಸ ಹೊಸ ವಿಚಾರಗಳನ್ನು ತಿಳಿಸಿಕೊಳ್ಳಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಕೆ.ಸಿ. ಪಾವಲಿ ಅವರು ಮಾತನಾಡಿ, ಸಮಾಜದ ನೈತಿಕತೆ ಕುಸಿದು ಅನೀತಿ, ಅನಾಚಾರ ಹೆಚ್ಚಾಗುತ್ತಿವೆ. ಇದರಿಂದ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ನ್ಯಾಯಲದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ರಾಜೀ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಪಡಿಸಿವುದು ಅತೀ ಅವಶ್ಯಕವಾಗಿದೆ. 

    ಜೊತೆಗೆ ಕಾನೂನು ಅರಿವು ಕಾರ್ಯಕ್ರಮದ ಮೂಲಕ ಕಾನೂನುಗಳ ಅರಿವು ಮೂಡಿಸುವ ಮೂಲಕ ಪ್ರಮಾದಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

    ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ, ಎ.ವಿ.ಪಾಟೀಲ, ಆರ್.ಗುಡಿ, ಲಕ್ಷ್ಮಿ ಗರಗ, ಎಸ್.ಎಂ.ಧನಂಜಯ,  ಸಕರ್ಾರಿ ಹಿರಿಯ ಅಭಿಯೋಜಕರಾದ ಸಿದ್ಧಾರೂಢ ಗೆಜ್ಜಿಹಳ್ಳಿ, ಸಕರ್ಾರಿ ವಕೀಲರಾದ  ಜಿ.ಸಿ.ಗಿರಿಯಪ್ಪನವರ ಹಾಗೂ ತರಬೇತಿ ನೀಡಲು ಆಗಮಿಸಿದ ಬೆಂಗಳೂರಿನ ವಕೀಲರಾದ ರಮಾದೇವಿ  ಉಪಸ್ಥಿತರಿದ್ದರು.

        ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಕೆ.ಶ್ರೀವಿದ್ಯಾ ಅವರು ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದಶರ್ಿ ಪಿ.ಎಂ.ಬೆನ್ನೂರ ವಂದಿಸಿದರು.