ಯುವಕನ ಮೇಲೆ ಐದು ಜನರ ತಂಡ ಹಲ್ಲೆ
A gang of five people attacked a young man
ಜಮಖಂಡಿ 10: ನಗರದಲ್ಲಿ ಹಾಡುಹಗಲ್ಲೆ ಯುವಕನ ಮೇಲೆ ಐದು ಜನರಿಂದ ಕಬ್ಬಿಣದ ರಾಡಿನಿಂದ ಅಮಾವೀಯತೆಯನ್ನು ಮರೆತು ಹಿಗ್ಗಾ-ಮುಗ್ಗಾ ಹಲ್ಲೆಯನ್ನು ಮಾಡಿರುವ ಘಟನೆ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ.
ಇಲ್ಲಿನ ಬಿ,ಎಲ್,ಡಿ, ಕಾಲೇಜು ಹತ್ತಿರ ನಡೆದ ಯುವಕನ ಮೇಲೆ ಕಬ್ಬಿಣ ರಾಡನಿಂದ ಹಲ್ಲೆಯನ್ನು ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ. ಐದು ಜನರು ಸೇರಿಕೊಂಡು ಹಿಗ್ಗಾ ಮುಗ್ಗಾ ಹಲ್ಲೆ ಮಾಡುವ ಸಮಯದಲ್ಲಿ ಯುವಕ ನನ್ನನು ಬಿಡಿ... ನನ್ನನು .. ಸಾಯಿಸಬೇಡಿ ...ಬಿಡಿ.. ಎಂದು ಹಲ್ಲೆ ಮಾಡುವ ಜನರಲ್ಲಿ ಅಂಗಾಲಾಚಿದರು ಸಹ ಬಿಡದ ಹಲ್ಲೆಕೋರರು ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶಂಭು ಪುಂಡಲೀಕ ಕೋರಿ (25) ಯುವಕನ ಮೇಲೆ ಕಂಕಣವಾಡಿ ಗ್ರಾಮದ ಐದು ಜನರು ಸೇರಿಕೊಂಡು ಕೈಯಲ್ಲಿ ಕಬ್ಬಿಣದ ರಾಡು ಹಾಗೂ ಕಲ್ಲಿನಿಂದ ಹಲ್ಲೆಯನ್ನು ನಡೆಸಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಂಕಣವಾಡಿ ಗ್ರಾಮದ ನರಸಿಂಹ ಅತ್ತೆಪ್ಪನ್ನವರ, ಈಶ್ವರ ಅತ್ತೆಪ್ಪನ್ನವರ, ಶ್ರೀಶೈಲ ಅತ್ತೆಪ್ಪನ್ನವರ, ಮಲ್ಲಪ್ಪ ಅತ್ತೆಪ್ಪನ್ನವರು, ಬಸು ಅತ್ತೆಪ್ಪನ್ನವರ ಹೀಗೆ ಐದು ಜನರು ಸೇರಿಕೊಂಡು ಅಮಾನವಿಯತೆಯನ್ನು ಮರೆತು ನನ್ನ ಮೇಲೆ ಮಹಿಳೆಯೊಬ್ಬಳಿಗೆ ನಿಂದನೆ ಮಾಡಿದ್ದಾನೆ ಎಂದು ಆಪಾದಿಸಿ. ಕಬ್ಬಿಣದ ರಾಡಿನಿಂದ ಮತ್ತು ಕಲ್ಲಿನಿಂದ ಹಲ್ಲೆಯನ್ನು ನಡೆಸಿದ್ದಾರೆಂದು ಹಲ್ಲೆಗೊಳ್ಳಗಾದ ಯುವಕ ಶಂಭು ಪುಂಡಲೀಕ ಕೋರಿ ತಿಳಿಸಿದ್ದಾನೆ. ನನಗೆ ಅನ್ಯಾಯವಾಗಿದೆ. ನನಗೆ ನ್ಯಾಯ ಸಿಗಬೇಕೆಂದು ಈ ಕುರಿತು ನಗರದ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದಾನೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 