ಯುವಕನ ಮೇಲೆ ಐದು ಜನರ ತಂಡ ಹಲ್ಲೆ
A gang of five people attacked a young man
ಜಮಖಂಡಿ 10: ನಗರದಲ್ಲಿ ಹಾಡುಹಗಲ್ಲೆ ಯುವಕನ ಮೇಲೆ ಐದು ಜನರಿಂದ ಕಬ್ಬಿಣದ ರಾಡಿನಿಂದ ಅಮಾವೀಯತೆಯನ್ನು ಮರೆತು ಹಿಗ್ಗಾ-ಮುಗ್ಗಾ ಹಲ್ಲೆಯನ್ನು ಮಾಡಿರುವ ಘಟನೆ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ.
ಇಲ್ಲಿನ ಬಿ,ಎಲ್,ಡಿ, ಕಾಲೇಜು ಹತ್ತಿರ ನಡೆದ ಯುವಕನ ಮೇಲೆ ಕಬ್ಬಿಣ ರಾಡನಿಂದ ಹಲ್ಲೆಯನ್ನು ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ. ಐದು ಜನರು ಸೇರಿಕೊಂಡು ಹಿಗ್ಗಾ ಮುಗ್ಗಾ ಹಲ್ಲೆ ಮಾಡುವ ಸಮಯದಲ್ಲಿ ಯುವಕ ನನ್ನನು ಬಿಡಿ... ನನ್ನನು .. ಸಾಯಿಸಬೇಡಿ ...ಬಿಡಿ.. ಎಂದು ಹಲ್ಲೆ ಮಾಡುವ ಜನರಲ್ಲಿ ಅಂಗಾಲಾಚಿದರು ಸಹ ಬಿಡದ ಹಲ್ಲೆಕೋರರು ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶಂಭು ಪುಂಡಲೀಕ ಕೋರಿ (25) ಯುವಕನ ಮೇಲೆ ಕಂಕಣವಾಡಿ ಗ್ರಾಮದ ಐದು ಜನರು ಸೇರಿಕೊಂಡು ಕೈಯಲ್ಲಿ ಕಬ್ಬಿಣದ ರಾಡು ಹಾಗೂ ಕಲ್ಲಿನಿಂದ ಹಲ್ಲೆಯನ್ನು ನಡೆಸಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಂಕಣವಾಡಿ ಗ್ರಾಮದ ನರಸಿಂಹ ಅತ್ತೆಪ್ಪನ್ನವರ, ಈಶ್ವರ ಅತ್ತೆಪ್ಪನ್ನವರ, ಶ್ರೀಶೈಲ ಅತ್ತೆಪ್ಪನ್ನವರ, ಮಲ್ಲಪ್ಪ ಅತ್ತೆಪ್ಪನ್ನವರು, ಬಸು ಅತ್ತೆಪ್ಪನ್ನವರ ಹೀಗೆ ಐದು ಜನರು ಸೇರಿಕೊಂಡು ಅಮಾನವಿಯತೆಯನ್ನು ಮರೆತು ನನ್ನ ಮೇಲೆ ಮಹಿಳೆಯೊಬ್ಬಳಿಗೆ ನಿಂದನೆ ಮಾಡಿದ್ದಾನೆ ಎಂದು ಆಪಾದಿಸಿ. ಕಬ್ಬಿಣದ ರಾಡಿನಿಂದ ಮತ್ತು ಕಲ್ಲಿನಿಂದ ಹಲ್ಲೆಯನ್ನು ನಡೆಸಿದ್ದಾರೆಂದು ಹಲ್ಲೆಗೊಳ್ಳಗಾದ ಯುವಕ ಶಂಭು ಪುಂಡಲೀಕ ಕೋರಿ ತಿಳಿಸಿದ್ದಾನೆ. ನನಗೆ ಅನ್ಯಾಯವಾಗಿದೆ. ನನಗೆ ನ್ಯಾಯ ಸಿಗಬೇಕೆಂದು ಈ ಕುರಿತು ನಗರದ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದಾನೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 