ನಿವೃತ್ತಿಯಾದ ಬಸಯ್ಯ ಸಿ. ಗಣಾಚಾರಿ ಅವರಿಗೆ ಸನ್ಮಾನ ಕಾರ್ಯಕ್ರಮ

ನಿವೃತ್ತಿಯಾದ   ಬಸಯ್ಯ ಸಿ. ಗಣಾಚಾರಿ ಅವರಿಗೆ ಸನ್ಮಾನ ಕಾರ್ಯಕ್ರಮ A felicitation program for the retired Basaiah C. Ganachari

ಹುಬ್ಬಳ್ಳಿ 30:  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ರೇಲ್ವೆ ಕಾರ್ಯಾಗಾರದಲ್ಲಿ ಸುದೀರ್ಘ 40ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ   ಬಸಯ್ಯ ಸಿ. ಗಣಾಚಾರಿ ಅವರಿಗೆ ಶಾಲು, ಮಾಲಾರೆ​‍್ಣ, ಗ್ರಂಥ ನೀಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿ, ನಿವೃತ್ ಜೀವನ ಸುಖಕರವಾಗಲೆಂದು ಶುಭ ಕೋರಿದರು. 

ಸೋಹನ ಸುರೇಶ ಹೊರಕೇರಿ, ಅಕ್ಕಮಹಾದೇವಿ ಬಿ. ಗಣಾಚಾರಿ, ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಉಪಾಧ್ಯಕ್ಷ ಬಸವರಾಜ ಲಿಂಗಶೆಟ್ಟರ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಕೆ.ಎಸ್‌.ಇನಾಮತಿ, ಬಸವರಾಜ ಬಿ. ಪಟ್ಟಣಶೆಟ್ಟಿ, ಶಿವಪ್ಪ, ಶಾರದಾ ಸಾಂಭ್ರಾಣಿ, ಶಕುಂತಲಾ ಪೂಜಾರ, ಬಸಯ್ಯ ಪೂಜಾರ, ಮುಂತಾದವರು ಇದ್ದರು.