ಕೆ.ಎನ್‌.ಫಣೀಂದ್ರ ಅವರಿಂದ ಗದುಗಿನ ವೀರ ನಾರಾಯಣ ದರ್ಶನ

ಕೆ.ಎನ್‌.ಫಣೀಂದ್ರ ಅವರಿಂದ ಗದುಗಿನ ವೀರ ನಾರಾಯಣ ದರ್ಶನ  A Glimpse of Gadag's Veera Narayana by K.N. Phanindra

ಗದಗ 7:  ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್‌.ಫಣೀಂದ್ರ ಅವರು ಶುಕ್ರವಾರ (ಆ.7) ರಂದು ಗದುಗಿನ ವೀರ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ  ವೀರ ನಾರಾಯಣನ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ವೀರನಾರಯಣನ ದೇವಸ್ಥಾನದ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಸುನೀಲಕುಮಾರ್ ಆರ್,  ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್,  ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಎಸ್‌.ಟಿ. ಸಿದ್ದಲಿಂಗಪ್ಪ, ಉಪಾಧಿಕ್ಷಕ ಲೋಕೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಂ.ಎಂ.ತುಂಬರಮಟ್ಟಿ, ನಗರಸಭೆ ಪೌರಾಯುಕ್ತ ರಾಜಾರಾಮ್ಪವಾರ, ಉಪಸ್ಥಿತರಿದ್ದರು.