ಮುದ್ದೇಬಿಹಾಳ 18: ಇತ್ತೀಚಿನ ದಿನಗಳಲ್ಲಿ ನೀವು ಯಾರ ಬಳಿಯಾದ್ರೂ ನಿಮ್ಮ ಬೆಸ್ಟ್ ದಿನಗಳು ಯಾವುದು ಅಂತ ಕೇಳಿದ್ರೆ ಬಾಲ್ಯದ ದಿನಗಳು ಅಂತ ಉತ್ತರ ಕೊಡ್ತಾರೆ. ಬಾಲ್ಯ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಬಾಲ್ಯದಲ್ಲಿನ ನಮ್ಮ ಸ್ನೇಹಿತರು. ಬದುಕಿನ ಬಗ್ಗೆ ಯಾವುದೇ ಕಲ್ಪನೆ ಇಲ್ಲದ ಹೊತ್ತಿನಲ್ಲಿ ನಮ್ಮ ಪ್ರಪಂಚದ ಭಾಗವಾಗಿದ್ದ ಆ ಸ್ನೇಹಿತರನ್ನ ನೆನೆದಾಗ, ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಾಗ ಏನೋ ಒಂಥರಾ ಖುಷಿ ಸಿಗುವುದು ಖಂಡಿತ. ಬಾಲ್ಯದ ಗೆಳೆಯ, ಗೆಳತಿಯರು ಈಗಲೂ ನಿಮಗೆ ಫ್ರೆಂಡ್ ಆಗಿ ಇದ್ದಾರೆ ಅಂದ್ರೆ ನೀವು ನಿಜಕ್ಕೂ ಗ್ರೇಟ್ ಎಂದು ಶಿವಾಚಾರ್ಯ ಮಹಾವಿದ್ಯಾಲಯದ ಅಧ್ಯಕ್ಷರಾದ ರವಿ ನಾಯಕ ಹೇಳಿದರು.
ಪಟ್ಟಣದ ತಂಗಡಗಿ ರಸ್ತೆ ಮಾರ್ಗದಲ್ಲಿರುವ ಶಿವಾಚಾರ್ಯ ಮಹಾವಿದ್ಯಾಲಯದಲ್ಲಿ 1985 ನೇ ಸಾಲಿನ ನಮ್ಮೂರ ಗೆಳೆಯರ ಬಳಗದ 7 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರುಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಈ ಗುರುವಂದನಾ ಕಾರ್ಯಕ್ರಮ ತುಂಬಾ ಮೆಚ್ಚುವಂತಹುದು,ಈ ಕಾರ್ಯಕ್ರಮದ ಮೂಲಕ ಎಲ್ಲಾ ಗುರುಗಳನ್ನು ಒಂದೇ ವೇದಿಕೆ ಕರೆತಂದು ನಮ್ಮ ಸಂಗಮ ಮಾಡಿದ್ದೀರಿ ಅದೇರೀತಿ ನೀವುಗಳೆಲ್ಲರೂ ಸೇರಿ ಈ ಕಾರ್ಯಕ್ರಮಕ್ಕೆ ಸ್ನೇಹ ಸಮ್ಮಿಲನದ ಮೂಲಕ ಮೆರುಗು ನೀಡಿ ನಿಮ್ಮ ತರಗತಿಯಲ್ಲಿನ ಸಿಹಿಕಹಿ ಘಟನೆಗಳನ್ನು ನೆನಪು ಮಾಡಿಕೊಂಡು ಗುರುಗಳಿಗೆ ಒಂದು ಆತ್ಮೀಯ ಭಾವನೆ ತೋರುವ ಮೂಲಕ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗಿದೆ .ಮೊದಲಿಗೆ ತಂದೆ ತಾಯಿಯೇ ಗುರುಗಳು ನಂತರದಲ್ಲಿ ಶಿಕ್ಷಕರು ಈ ಮೂರನೇ ವ್ಯಕ್ತಿಗೆ ನೀವು ಗುರುವಿಗೆ ವಿಶೇಷ ಗೌರವಿಸುತ್ತಿರುವುದು ಮಹತ್ವದಲ್ಲಿ ಒಂದಾಗಿದೆ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಗೆಳೆಯರ ಬಳಗ ಪ್ರೇರಣೆಯಾಗಿ ನಿಲ್ಲಬೇಕಿದೆ. ಈ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇರಬೇಕು,ಪ್ರೀತಿ, ವಾತ್ಸಲ್ಯ,ಸಂಯಮ,ಗೌರವ, ಇವೆಲ್ಲವುಗಳನ್ನು ನೀವು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಅದು ಶಿಕ್ಷಕರಿಗೆ ಗೌರವ ತಂದಹಾಗೆ ಪ್ರತಿಯೊಬ್ಬರೂ ನಿಮ್ಮ ನಿಮ್ಮ ಜೀವನದಲ್ಲಿ ಮುಂದೆ ಬರಲು ಬರೀ ಸರಕಾರಿ ನೌಕರಿಯಿಂದ ಮಾತ್ರ ಸಾದ್ಯವಿಲ್ಲ.
ಎಷ್ಟೋ ಜನ ಇಂದಿಗೂ ಬಾಲ್ಯದ ಗೆಳೆಯರ ಜೊತೆ ಸಂಪರ್ಕದಲ್ಲಿದ್ದಾರೆ ಕಾರಣ ಅಲ್ಲಿ ಎಷ್ಟು ನಿಷ್ಕಲ್ಮಶವಾದ ಪ್ರೀತಿ, ವಾತ್ಸಲ್ಯ ಮತ್ತು ಆತ್ಮೀಯತೆ ಇದೆ ಎಂಬುದು ತೋರಿಸಿಕೊಡುತ್ತದೆ. ಆದರೆ ನಮ್ಮೂರ ಗೆಳೆಯರ ಬಳಗದವರು ಸುಮಾರು 40 ಗಟ್ಟಿತನ ಬ0ದಿರುವದು ಪಡುವಂತಹದ್ದಾಗಿದೆ ವರ್ಷಗಳಿಂದ ಕಾಪಾಡಿಕೊಂಡುಹೋಗಬೇಕಿದೆ ಎಂದರು.
ಇನ್ನೋರ್ವ ನಮ್ಮೂರ ಗೆಳೆಯರ ಬಳಗದ ಸದಸ್ಯ ವೆಂಕಟೇಶ ಕೊರ್ತಿ ಮಾತನಾಡಿ, ಈ ನಮ್ಮೂರ ಗೆಳೆಯರ ಬಳಗದ ಕಾರ್ಯಕ್ರಮವು ಇಂದಿನ
ಕಾರ್ಯಕ್ರಮಗಳ ಭಗ್ಗೆ ಹಾಗೂ ಅದರ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಡಾ. ಸಂಜಯ್ ಮಾಲಗತ್ತಿ ಅವರು ಪ್ರಾಸ್ತಾವಿಕ ಮಾತನಾಡಿದರು. ಗೆಳೆಯರ ಬಳಗದ ಸದಸ್ಯರಾದ ಉಮೇಶ ವರದಪ್ಪನವರ, ಮುಕುಂದ ಕುಲಕರ್ಣಿ, ಡಾ. ಸಂಜಯ ಪಾಟೀಲ, ಶರಣು ದೇಗಿನಾಳ ಅವರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
2025 ಗೆಳೆಯರ ಬಳಗದ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನನೀಡಿಗೌರವಿಸಲಾಯಿತು. ಈ ಸಮಯದಲ್ಲಿ ರಾಜು ಓಸ್ವಾಲ್, ಇಕ್ವಾಲ್ ಮುದ್ದೇಬಿಹಾಳ, ಲೆಶಪ್ಪ ಪ್ಯಾಟಿಗೌಡ, ರವಿ ಪೂಜಾರಿ, ಬಸ್ಸು ಸಿದ್ದಾಪೂರ, ಎಂ.ಪಿ. ಉಪನಾಳ, ಮ್ಯಾಗೇರಿ, ಬಾಳದರಿಪ್ಪ, ಜಗದೀಶ ಸೋಮನಕಟ್ಟಿ, ಡಾ. ಬಾಬು ಗುರಿಕಾರ, ಸಿದ್ದು ಮಾತಿನ, ಪ್ರಶಾಂತ ಜವಳಗಿ, ಮುನ್ನಪ ಮುರಾಳ, ಬಸವಂತ ದೇಶಪಾಂಡೆ, ಸೇರಿದಂತೆ ಅನೇಕ ಗೆಳೆಯರ ಬಳಗದವರು ಉಪಸ್ತಿತರಿದ್ದರು. ಗೆಳೆಯರ ಬಳಗದ ಸದಸ್ಯ ಬಾಳು ಗಿಂಡಿ ಪ್ರಾರ್ಥಿಸಿದರು. ಶಿಕ್ಷಕ ಬಸವರಾಜ ಕಲ್ಲುಂಡಿ ನಿರೂಪಿಸಿ ವಂದಿಸಿದರು.