ಪಟ್ಟಣಕುಡಿ ಎಸ್ಸಿ-ಎಸ್ಟಿ ಕಾಲನಿಗಳ ಅಭಿವೃದ್ಧಿಗೆ 75 ಲಕ್ಷ ಅನುದಾನ
75 lakh grant for the development of SC-ST colonies in Pattanakudi
ಚಿಕ್ಕೋಡಿ 25 : ತಾಲೂಕಿನ ಪಟ್ಟಣಕುಡಿ ಗ್ರಾಮದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಒಟ್ಟು ರೂ. 75 ಲಕ್ಷಗಳ ಅನುದಾನ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ಗ್ರಾಮಸ್ಥರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿದ್ಯಾಧರ ಕಾಗೆ, ನಮ್ಮ ನಾಯಕರಾದ ಪ್ರಕಾಶ ಬಾ. ಹುಕ್ಕೇರಿ (ವಿಧಾನ ಪರಿಷತ್ ಸದಸ್ಯರು ಹಾಗೂ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳು) ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಅವರಲ್ಲಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ ಕಾಲನಿಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೆವು.
ನಮ್ಮ ಮನವಿಗೆ ಸ್ಪಂದಿಸಿ ಎಸ್ಸಿ ಕಾಲನಿಗೆ ರೂ. 25 ಲಕ್ಷ ಹಾಗೂ ಎಸ್ಟಿ ಕಾಲನಿಗೆ ರೂ. 50 ಲಕ್ಷಗಳ ಅನುದಾನ ಮಂಜೂರು ಮಾಡಲಾಗಿದೆ. ಈ ಮೂಲಕ ಒಟ್ಟು ರೂ. 75 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ ಡಿಗ್ರೆ, ರಾಜು ಮುಲ್ಲಾ, ಲಕನ ಪರಿಟ, ಶಾನಬಾಜ್ ಮುಲ್ಲಾ, ಅನೀಲ ಮಾಳಿ, ರೋಹಿತ್ ಕಾಗೆ, ರಾಜು ಕುರಣೆ, ಅಣ್ಣಪ್ಪಾ ಬೇರಡ, ಅಣ್ಣಪ್ಪಾ ನಾಯಿಕ, ಅಪ್ಪಯ್ಯಾ ಟಾಕಳೆ, ಬಾಬಾಲಾಲ್ ಖಾನಾಪೂರೆ, ಅಪ್ಪಾಸಾಬ ಧನಗರ, ಶಿವಪ್ಪಾ ಕುರಣೆ, ದೇವಲ್ ನಾಯಿಕ, ಬಾಳು ಕುರಣೆ,
ಸಿದ್ದು ನಾಯಿಕ, ಪರಶುರಾಮ ದೇಸಾಯಿ, ಸಂದೀಪ್ ಕುರಣೆ, ರವಿ ಕುರಣೆ, ಯುನೂಸ್ ಗಳತಗೆ, ಸಂಜು ನಾಯಿಕ, ಅಕ್ಬರ್ ತಹಶೀಲ್ದಾರ್, ಸದಾಶಿವ ಖವಟಕೊಪ್ಪ, ಅಲ್ಲಾಬಕ್ಷ ಖಾನಾಪೂರೆ, ಗಂಗಾರಾಮ ಕಾಗೆ, ಅಜೀತ್ ಕಾಂಬಳೆ, ಅಪ್ಪಾ ಕಾಂಬಳೆ, ಲಕ್ಷ್ಮಣ ನವಲೆ, ವಿಶಾಲ್ ಭಾಕವೆ, ಶ್ರೀರಂಗ ಕಾಂಬಳೆ, ಸಚಿನ್ ದೇಶಮಾನೆ, ಸೌರಭ ಡಿಗ್ರೆ, ಕಾಕಾಸಾಬ ಕಾಂಬಳೆ, ಸುರೇಶ್ ಕಾಂಬಳೆ, ಪೋಪಟ್ ಕಾಂಬಳೆ, ಸೂರ್ಯಕಾಂತ ಕಾಂಬಳೆ ಸೇರಿದಂತೆ ಗ್ರಾಮಸ್ಥರು, ಸಹಕಾರ ಸಂಘಗಳ ಅಧ್ಯಕ್ಷರು-ಉಪಾಧ್ಯಕ್ಷರು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ರಾಮನಗೌಡ ಪಾಟೀಲ, ರಾಜಕುಮಾರ ಬಾಗಲಕೋಟೆ ಹಾಗೂ ಗುತ್ತಿಗೆದಾರ ಈರ್ಪ ಮಲಕಾಪೂರೆ, ರಾಜು ಹಕಾರೆ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 