70ನೇ ಕರ್ನಾಟಕ ರಾಜ್ಯೋತ್ಸವ

70ನೇ ಕರ್ನಾಟಕ ರಾಜ್ಯೋತ್ಸವ 70th Karnataka Rajyotsava: Dharwad News

ಧಾರವಾಡ  31: ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಮಂಜುಶ್ರೀ ಶಿಶುವಿಹಾರ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲಿ ್ಲಮಕ್ಕಳು 70ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ನಕ್ಷೆ ಬಿಡಿಸಿ, ಮಕ್ಕಳು ಕನ್ನಡ ನಾಡಿನ ಪ್ರಸಿದ್ಧ ಮಹನೀಯರ ವೇಷಭೂಷಣ ಧರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜೆ.ಎಸ್‌.ಎಸ್ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದರವರು, ಐ.ಟಿಐ ಕಾಲೇಜಿನ ಪ್ರಾಚಾರ್ಯರಾದ   ಮಹಾವೀರ ಉಪಾಧ್ಯೆಯವರು ಹಾಗೂ ಪ್ರಾಚಾರ್ಯೆ   ಪಿ.ಎಸ್‌.ಸುಧಾಮಣಿಯವರು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.